'ಕೇವಲ ರಾಜಕೀಯ ಅವಕಾಶಕ್ಕಾಗಿ ನಾವು ಒಗ್ಗೂಡಿಲ್ಲ, ಅರ್ ಎಸ್ ಎಸ್, ಬಿಜೆಪಿ, ಪ್ರಧಾವಿ ಮೋದಿ ಎದುರಿಸಲು ಮಹಾಘಟ್ ಬಂಧನ್ ರಚನೆಯಾಗಿದ್ದು, ಇದು ದೇಶದ ಜನರ ಭಾವನಾತ್ಮಕ ವಿಚಾರ ಕೂಡ ಆಗಿದೆ. ಪ್ರಧಾನಿ ಮೋದಿ ಸಂವಿಧಾನ ಮತ್ತು ದೇಶದ ಪ್ರಬಲ ಶಕ್ತಿಯಾಗಿರುವ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ದೇಶದಲ್ಲಿ ತೈಲ ಬೆಲೆ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಗಗನಕ್ಕೇರಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಜಿಎಸ್ ಟಿಗೆ ಸೇರಿಸುವಂತೆ ನಾವು ಆಗ್ರಹಿಸುತ್ತಿದ್ದೇವೆ. ಆದರೂ ಪ್ರಧಾನಿ ಮೋದಿ ಇದರ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಹೇಳಿದರು.