1576ರ ಹಲ್ದಿಘಾಟಿ ಯುದ್ಧದಲ್ಲಿ ಯಾರು ಗೆದ್ದರು ಅಥವಾ ಯಾರು ಸೋತರು ಎಂಬುದು ಮುಖ್ಯವಾಗುವುದಿಲ್ಲ. ಆತ್ಮ ಗೌರವಕ್ಕಾಗಿ ಅರಾವಳಿ ಬೆಟ್ಟದಲ್ಲಿಯೇ ನಿಂತು ಪ್ರತಾಪ್ ಸಿಂಗ್ ಹಲವು ವರ್ಷಗಳ ಕಾಲ ಹೋರಾಟ ಮಾಡಿದ್ದರು. ಹೋರಾಟ ಕೇವಲ ಒಂದು ದಿನದ ಮಾಡುವಂತಹದ್ದಲ್ಲ, ಹಲವು ವರ್ಷಗಳ ಮಾಡುವಂತಹದ್ದು ಎಂಬುದಕ್ಕೆ ಮಹಾರಾಣ ಪ್ರತಾಪ್ ಅವರು ಉತ್ತಮ ಉದಾಹರಣೆಯಾಗಿದ್ದಾರೆ. ತನ್ನ ಸಾಮ್ರಾಜ್ಯವನ್ನು ಗೆದ್ದುಕೊಳ್ಳುವ ಮೂಲಕ ಅಕ್ಬರ್ ಅಲ್ಲ, ತಾವೇ ದೊಡ್ಡ ವ್ಯಕ್ತಿ ಎಂಬುದನ್ನು ಮಹಾರಾಣಾ ಪ್ರತಾಪ್ ಅವರು ಸಾಬೀತುಪಡಿಸಿದ್ದಾರೆಂದು ತಿಳಿಸಿದ್ದಾರೆ.