ಪೂಂಛ್ ನಲ್ಲಿ ಔರಂಗಜೇಬ್ ನ ಅಂತ್ಯಕ್ರಿಯೆ ನಡೆದಿದ್ದು ಯೋಧನಿಗೆ ನೂರಾರು ಜನರು ಅಂತಿಮ ನಮನ ಸಲ್ಲಿಸಿದರು. ನನ್ನ ಪುತ್ರ ಆತನ ಪ್ರತಿಜ್ಞೆಯನ್ನು ಉಳಿಸಿಕೊಂಡಿದ್ದಾನೆ, ದೇಶಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಂಡಿದ್ದಾನೆ, ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಮಾಡುತ್ತೇನೆ ಎಂದು ಔರಂಗಜೇಬ್ ನ ತಂದೆ ಹೇಳಿದ್ದಾರೆ.