ಇಂತಹುದೊಂದು ವಾದಕ್ಕೆ ಕಾರಣವಾಗಿದ್ದು, ಟಿಟಿಡಿಯ ಮಾಜಿ ಪ್ರಧಾನ ಅರ್ಚಕ ಹಾಗೂ ಆಗಮಶಾಸ್ತ್ರ ತಜ್ಞ ರಮಣ ದೀಕ್ಷಿತುಲು ಅವರ ಆರೋಪ. ರಮಣ ದೀಕ್ಷಿತುಲು ಅವರ ಆರೋಪದಂತೆ ತಿರುಮಲ ದೇಗುಲದ ಸಿಬ್ಬಂದಿಗಳು ಆಡಳಿತ ವರ್ಗದ ಅನುಮತಿ ಇಲ್ಲದೇ ದೇವಾಲಯದ ಪ್ರಸಾದ ತಯಾರಿಸುವ ಕೋಣೆಯನ್ನು ದುರಸ್ತಿ ಮಾಡಿದ್ದರು. ಆದರೆ ಆ ಕೋಣೆಯಲ್ಲಿ ನೆಲವನ್ನು ಅಗಿದುರುವ ಕುರುಹುಗಳು ಪತ್ತೆಯಾಗಿದೆ. ಈ ಬಗ್ಗೆ ತಾವು ವಿಚಾರಿಸಿದಾಗ ಕೋಣೆಯಲ್ಲಿನ ಕಲ್ಲಿನ ನೆಲಹಾಸನ್ನು ಬದಲಿಸಬೇಕಿತ್ತು ಎಂದು ಹೇಳಿದ್ದಾರೆ. ಆದರೆ ಕೇವಲ 5 ರಿಂದ 6 ಕಲ್ಲಿನ ನೆಲಹಾಸುಗಳನ್ನು ಬದಲಿಸಲು ನೆಲವನ್ನು ಅಗೆಯುವ ಅಗತ್ಯವೇನಿತ್ತು. ಅಲ್ಲದೆ ಬರೊಬ್ಬರಿ 25 ದಿನಗಳ ಕಾಲ ಆ ಕೋಣೆಯನ್ನು ಮುಚ್ಚಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.