ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಪ್ರದಾನಿ ಮೋದಿ ಅವರನ್ನು ಏಕೆ ಪ್ರಶ್ನಿಸಬಾರದು?

ತೆಲಂಗಾಣ ರೈತರಿಗೆ ಕೇಂದ್ರ ಸರ್ಕಾರ ಯಾವುದೇ ರೀತಿಯ ನವೆರವು ನೀಡುತ್ತಿಲ್ಲ, ಹೀಗಿರುವಾ ಮುಖ್ಯಮಂತ್ರಿ ಕೆ, ಚಂದ್ರಶೇಖರ್ ರಾವ್ ಈ ಸಂಬಂಧ ಏಕೆ ...
ಕೆ. ಚಂದ್ರಶೇಖರ್ ರಾವ್
ಕೆ. ಚಂದ್ರಶೇಖರ್ ರಾವ್
ಹೈದರಾಬಾದ್: ತೆಲಂಗಾಣ ರೈತರಿಗೆ ಕೇಂದ್ರ ಸರ್ಕಾರ ಯಾವುದೇ ರೀತಿಯ ನೆರವುರವು ನೀಡುತ್ತಿಲ್ಲ, ಹೀಗಿರುವಾ ಮುಖ್ಯಮಂತ್ರಿ ಕೆ, ಚಂದ್ರಶೇಖರ್ ರಾವ್ ಈ ಸಂಬಂಧ ಏಕೆ ಪ್ರಧಾನಿ ಅವರನ್ನು ಪ್ರಶ್ನಿಸಬಾರದು ಎಂದು ಕಾಂಗ್ರೆಸ್ ಸದಸ್ಯರು ಕೇಳಿದ್ದಾರೆ,
2014-18 ರವರೆಗೆ ರಾಜ್ಯದ ಲಕ್ಷಾಂತರ ರೈತರು ಬರ ಮತ್ತಿತರ ನೈಸರ್ಗಿಕ ವಿಕೋಪಗಳಿಂದಾಗಿ ಬಹುದೊಡ್ಡ ನಷ್ಟವಾಗಿದೆ,ಇಲ್ಲಿಯವರೆಗೂ ಇವರಲ್ಲಿ ಒಬ್ಬರಿಗೂ ಕೇಂದ್ರ ಸರ್ಕಾರದಿಂದ ಒಂದು ಪೈಸೆ ಪರಿಹಾರ ಸಿಕ್ಕಿಲ್ಲ, ತೆಲಂಗಾಣದ ರೈತರಿಗೆ ಪರಿಹಾರ ಹಣ ನೀಡದ್ದನ್ನು ಚಂದ್ರಶೇಖರ್ ರಾವ್ ಏಕೆ ಪ್ರಶ್ನಿಸಬಾರದು ಎಂದು  ಟಿಪಿಸಿಸಿ ವಕ್ತಾರ ಜಾಸೋಜು ಶರವಣ್ ಕೇಳಿದ್ದಾರೆ.
ಮುಖ್ಯಮಂತ್ರಿಗಳಿಗೆ ಭಾನುವಾರ  ಪತ್ರ ಬರೆದಿರುವ ಶ್ರವಣ್ ಇತ್ತೀಚೆಗೆ ಮುಖ್ಯಮಂತ್ರಿ ಚಂದ್ರ ಶೇಖರ್ ರಾವ್ ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದ್ದರು ಆದರೆ ಇದರಿಂದ ರಾಜ್ಯಕ್ಕೆ ಫಲಿತಾಂಶ ಸಿಕ್ಕಿಲ್ಲ, ಕೇಂದ್ರದ ಮೇಲೆ ಒತ್ತಡ ಹಾಕುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com