ಇನ್ನು ಗುರುವಾರ ಹೈದರಾಬಾದ್ನಲ್ಲಿ ನಡೆದ ಬೆರಳಚ್ಚು ಬ್ಯೂರೊದ ನಿರ್ದೇಶಕರ 19ನೇ ಅಖಿಲ ಭಾರತ ಸಮಾವೇಶದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಅಹಿರ್ ಅವರು, ಆಧಾರ್ ಮಾಹಿತಿಗಳ ಹಂಚಿಕೆಗೆ ಅವಕಾಶ ಹಾಗೂ ಕೈದಿಗಳ ಗುರುತು ಕಾಯ್ದೆಗೆ ತಿದ್ದುಪಡಿ ಸಲಹೆ ಬಗ್ಗೆ ಸಚಿವಾಲಯದಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದರು. ಪ್ರಮುಖ ಉದ್ದೇಶಗಳಿಗಾಗಿ ಪೊಲೀಸರಿಗೆ ಅಗತ್ಯ ಇರುವ ಆಧಾರ್ ದತ್ತಾಂಶದ ಸೀಮಿತ ಲಭ್ಯತೆ ಇರಬೇಕು ಎಂದು ನ್ಯಾಶನಲ್ ಕ್ರೈಮ್ ರೆಕಾರ್ಡ್ ಬ್ಯುರೊದ ನಿರ್ದೇಶಕ ಇಶಾ ಕುಮಾರ್ ಅವರ ನೀಡಿದ ನಿರ್ದಿಷ್ಟ ಸಲಹೆಗೆ ಸಚಿವರು ಈ ಪ್ರತಿಕ್ರಿಯೆ ನೀಡಿದ್ದರು.