ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶವನ್ನು ಸ್ವಚ್ಚತೆಯಿಂದ ಇಡುವ ನಿಟ್ಟಿನಲ್ಲಿ ನಾಗರಿಕರು ಪ್ರಯತ್ನಿಸಬೇಕಾಗಿದೆ ಎಂದರು. ರಾಷ್ಟ್ರಪಿತ ಮಹಾತ್ಮಗಾಂಧಿ ಸ್ವತಂತ್ರ ಒಂದನೇ ಕನಸಾಗಿ ಹೊಂದಿರಲಿಲ್ಲ. ಸ್ವಚ್ಛ ಭಾರತ ಕೂಡಾ ಅವರ ಕನಸಾಗಿತ್ತು, ನಮ್ಮ ದೇಶವನ್ನು ಸ್ವಚ್ಚವಾಗಿಡುವುದು ಹಾಗೂ ಭಾರತ ತಾಯಿಗೆ ಸೇವೆ ಮಾಡುವುದು ನಮ್ಮ ಶಪಥವಾಗಬೇಕು ಎಂದು ಕರೆ ನೀಡಿದರು.