'ಶಿವ ಭಕ್ತ' ರಾಹುಲ್ ಗಾಂಧಿ ಮಾನಸ ಸರೋವರ ಯಾತ್ರೆ ಕಗ್ಗಂಟು

ಕರ್ನಾಟಕ ವಿಧಾನಸಭೆ ಚುನಾವಣೆ ರ್ಯಾಲಿ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದ ಮಾನಸ ಸರೋವರ ಯಾತ್ರೆ ಕಗ್ಗಂಟಾಗಿದೆ...
ರಾಹುಲ್ ಗಾಂಧಿ-ಕೈಲಾಸ ಮಾನಸಸರೋವರ
ರಾಹುಲ್ ಗಾಂಧಿ-ಕೈಲಾಸ ಮಾನಸಸರೋವರ
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ರ್ಯಾಲಿ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದ ಮಾನಸ ಸರೋವರ ಯಾತ್ರೆ ಕಗ್ಗಂಟಾಗಿದೆ. 
ರಾಹುಲ್ ಗಾಂಧಿ ಕೇಂದ್ರದ ಸರ್ಕಾರದ ಅನುಮತಿಯ ನಿರೀಕ್ಷೆಯಲ್ಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದ್ದರೆ, ಅತ್ತ ವಿದೇಶಾಂಗ ಸಚಿವಾಲಯ ರಾಹುಲ್ ಅವರಿಂದ ಯಾವುದೇ ಅರ್ಜಿ ಬಂದಿಲ್ಲ ಎಂದು ತಿಳಿಸಿದೆ. 
ಮಾನಸ ಸರೋವರ ಯಾತ್ರೆ ಘೋಷಣೆಯಾಗಿ ಒಂದೂವರೆ ತಿಂಗಳಾದರೂ ರಾಹುಲ್ ಯಾತ್ರೆ ಬಯಕೆ ಕೈಗೂಡಿಲ್ಲ. ಬದಲಾಗಿ ಕಗ್ಗಂಟಾಗಿದೆ. 
ಕೈಲಾಸ ಮಾನಸ ಸರೋವರ ಯಾತ್ರೆಗೆ ಅರ್ಜಿ ಸಲ್ಲಿಸುವ ಗಡುವು ಮಾ.23ಕ್ಕೆ ಮುಗಿದುಹೋಗಿದೆ. ಆದರೆ ಯಾತ್ರೆ ಕೈಗೊಳ್ಳುವ ಕುರಿತು ರಾಹುಲ್ ಘೋಷಿಸಿದ್ದು ಏಪ್ರಿಲ್ 30ರಂದು ಆದಾಗ್ಯೂ ಸಂಸದ ಎಂಬ ಕಾರಣಕ್ಕೆ ವಿದೇಶಾಂಗ ಸಚಿವಾಲಯದಿಂದ ವಿಶೇಷ ಅನುಮತಿ ಸಿಗಬಹುದು ಎಂಬ ವಿಶ್ವಾಸದಲ್ಲಿದ್ದಾರೆ. ಈ ಯಾತ್ರೆಗೆ ತೆರಳುವವರು ವಿದೇಶಾಂಗ ಸಚಿವಾಲಯದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com