"ದೇವಿಯ ವಿಗ್ರಹದಿಂದ ಕಣ್ಣೀರು ಸುರಿಯುತ್ತಿರುವುದು ನಿಜ, ದೇವಿಯನ್ನು ಸಂತುಷ್ಟಗೊಳಿಸಲು ದೇವಾಲಯ ನಿರ್ಮಿಸಿಸಲು ತೀರ್ಮಾನಿಸಿ, ಆಶೀರ್ವಾದ ಬೇಡಿದ್ದೇವೆ" ಎಂದು ಗ್ರಾಮಸ್ಥರಾಗಿರುವ ಚಂದ್ರಮೌಳಿ ಹೇಳಿದ್ದಾರೆ. ದೇವಾಲಯದಲ್ಲಿ ಪೂಜೆ ಸಲ್ಲಿಸುವ ಅರ್ಚಕಿ ಅಂಜವ್ವ ಈ ಘಟನೆಯನ್ನು ಮೊದಲು ಗಮನಿಸಿದ್ದಾರೆ. ಎಂದಿನಂತೆ ಪ್ರತಿ ನಿತ್ಯ ಪೂಜೆ ಸಲ್ಲಿಸಲು ಬಂದಿದ್ದಾಗ ವಿಗ್ರಹದಲ್ಲಿ ಕಣ್ಣೀರು ಕಾಣಿಸಿಕೊಂಡಿತ್ತು. ಸುಮಾರು 15 ನಿಮಿಷಗಳ ಕಾಲ ಇದೇ ರೀತಿ ಮುಂದುವರೆದಿತ್ತು ಎಂದು ಅಂಜವ್ವ ಹೇಳಿದ್ದಾರೆ.