ಇದಕ್ಕು ಮುನ್ನ ತಮ್ಮ ವಿರುದ್ಧದ ಕೆಲವು ಆರೋಪಗಳನ್ನು ಕೈಬಿಡಬೇಕೆಂದು ಚೌಕಾಶಿ ಮಾಡಿದ್ದಾರೆ ಎಂಬ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಆರೋಪವನ್ನುತಳ್ಳಿಹಾಕಿದ್ದ ವಿಜಯ್ ಮಲ್ಯ, ಚೌಕಾಶಿ ಮಾಡುತ್ತಿದ್ದೇನೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಧಿಕಾರಿಗಳು ಮೊದಲು ಜಾರಿ ನಿರ್ದೇಶನಾಲಯದ ಆರೋಪಪಟ್ಟಿಯನ್ನು ಓದಲಿ ಎಂಬುದು ನನ್ನ ಸವಿನಯ ಸಲಹೆಯಾಗಿದೆ. ನನ್ನ ಆಸ್ತಿಯ ಲೆಕ್ಕ ತೋರಿಸಿದ ನ್ಯಾಯಾಲಯದ ಎದುರು ಅದೇ ಮನವಿಯನ್ನು ಮಂಡಿಸಲಿ ಎಂದು ನಾನು ಜಾರಿ ನಿರ್ದೇಶನಾಲಯ ಅಧಿಕಾರಿಗಳನ್ನು ಕೇಳುತ್ತೇನೆ ಎಂದು ವಿಜಯ್ ಮಲ್ಯ ಟ್ವೀಟ್ ಮಾಡಿದ್ದರು.