ಹಿಮಾಚಲ ಪ್ರದೇಶದಲ್ಲಿ ರಸ್ತೆ ಅಪಘಾತ: ಪಂಜಾಬ್ ಮೂಲದ 8 ಭಕ್ತಾದಿಗಳ ಸಾವು

ಬಿಲಾಸ್ ಪುರ ಜಿಲ್ಲೆಯ ಮನಾಲಿ-ಚಂಡಿಗಡ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಪಂಜಾಬ್ ಮೂಲದ 8 ಭಕ್ತರು ಸಾವನ್ನಪ್ಪಿರುವ ಘಟನೆ ನಡೆದಿದೆ. ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಶಿಮ್ಲಾ: ಬಿಲಾಸ್ ಪುರ ಜಿಲ್ಲೆಯ ಮನಾಲಿ-ಚಂಡಿಗಡ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಪಂಜಾಬ್ ಮೂಲದ 8 ಭಕ್ತರು ಸಾವನ್ನಪ್ಪಿರುವ ಘಟನೆ ನಡೆದಿದೆ. 
ಅಮೃತಸರ ಪಟ್ಟಣದ ಕಾಳೆ ಗಾಣಪುರ್ ಸಮೀಪದ ಗ್ರಾಮವೊಂದರ ನಿವಾಸಿಗಳು, ಕುಲ್ಲು ಜಿಲ್ಲೆಯ ಶಿಖ್ ಮುನಿಕರನ್ ದೇವಾಲಯಕ್ಕೆ ತೆರಳಿ ವಾಪಸ್ ಬರುವಾಗ  ನಡೆದ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.
ಗಾಯಗೊಂಡಿರುವ ಒಬ್ಬನನ್ನು ನಲಗ್ರಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಸಾವನ್ನಪ್ಪಿರುವ ಎಲ್ಲರು ಒಂದೇ ಕುಟುಂಬದವರಾಗಿದ್ದಾರೆ, ಇನ್ನೋವಾ ವಾಹನದಲ್ಲಿ ಒಂದೇ ಕುಟುಂಬಸ್ಥರು ಇದ್ದರು,  ಕಾರಿನಲ್ಲಿ ಹೆಚ್ಚಿನ ಮಂದಿ ಪ್ರಯಾಣಿಸುತ್ತಿದ್ದ ಕಾರಣ, ನಿಯಂತ್ರಣ ತಪ್ಪಿ ವಾಹನ ಪಲ್ಟಿ ಹೊಡೆದಿದೆ, ಇದರ ಪರಿಣಾಮವಾಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com