ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಪ್ರತಿಭಟನೆಯಲ್ಲಿ ತೊಡಗಿದ್ದ ಅಭ್ಯರ್ಥಿಗಳು ಇಂದು ದೆಹಲಿ ಬಿಜೆಪಿ ಸಂಸದರಾದ ಮನೋಜ್ ತಿವಾರಿ ಅವರೊಡನೆ ಎಸ್ .ಎಸ್ . ಸಿ ಅಧ್ಯಕ್ಷ ಅಶೀಮ್ ಖುರಾನಾ ಅವರನ್ನು ಭೇಟಿಯಾಗಿದ್ದಾರೆ. ಆ ವೇಳೆ ಅವರು ಖುರಾನಾ ಅವರಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದಾರೆ. ಅದರಲ್ಲಿ ಅವರು ಫೆ.17ರಿಂದ 22ರವರೆಗೆ ನಡೆದಿದ್ದ ಕಂಬೈನಡ್ ಗ್ರ್ಯಾಜುಯೇಟ್ ಲೆವೆಲ್ (ಟೈರ್ II) ಪರೀಕ್ಷೆಗಳಲ್ಲಿ ಮಡೆದಿದ್ದ ಉತ್ತರ ಪತ್ರಿಕೆ ಸೋರಿಕೆ ಹಗರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.