ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ರವಿಶಂಕರ್ ಅವರು, ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ವಿವಾದ ಇತ್ಯರ್ಥವಾಗದಿದ್ದರೆ ಭಾರತವು ಮುಂದೆ ಸಿರಿಯಾ ಆಗಿ ಮಾರ್ಪಡಲಿದೆ ಎಂದು ಹೇಳಿದ್ದರು. ಇಂಡಿಯಾ ಟುಡೇ ನಿಯತಕಾಲಿಕೆಗೆ ನೀಡಿರುವ ಸಂದರ್ಶನದಲ್ಲಿ ಹೀಗೆ ಹೇಳಿದ್ದ ಶ್ರೀ ಶ್ರೀ, ""ವಿವಾದಿತ ಜಾಗದಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಇಸ್ಲಾಂನಲ್ಲೇ ವಿರೋಧವಿದೆ. ಹಾಗಾಗಿ, ಮುಸ್ಲಿಮರು ಅಯೋಧ್ಯೆ ಬಗೆಗಿನ ತಮ್ಮ ಹಠ ಬಿಡಬೇಕು'' ಎಂದು ಆಗ್ರಹಿಸಿದ್ದಾರೆ.