ಒಂದು ಹಂತದಲ್ಲಿ ತಾಳ್ನೆ ಕಳೆದುಕೊಂಡ ಸಭಾಧ್ಯಕ್ಷ ವೆಂಕಯ್ಯ ನಾಯ್ಡು, ಇದೇನೂ ಬಜಾರ್ ಅಲ್ಲ, ಸಂಸತ್ತು ಎಂದು ಸದಸ್ಯರಿಗೆ ಎಚ್ಚರಿಕೆ ನೀಡಿದರು. ಸದಸ್ಯರ ನಡವಳಿಕೆ ನಿಜಕ್ಕೂ ನೋವು ತಂದಿದ್ದು, ಇಂತಹ ಕ್ಷುಲ್ಲಕ ತಂತ್ರಗಾರಿ ಪ್ರದರ್ಶನ ಬೇಡ. ಸಂಸತ್ ನಲ್ಲಿ ಈ ರೀತಿಯ ವರ್ತನೆ ಮಾಡಿ ಜನರಿಗೆ ಹೇಗೆ ಮುಖ ತೋರಿಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.