ಪಕ್ಷದ ಕಚೇರಿಯ ಕಿಚನ್ನಲ್ಲಿ ತಯಾರಾಗುವ ಅಡುಗೆಯನ್ನೇ ಅವರು ಸೇವಿಸಲಿದ್ದಾರೆ. ಹೊಸ ಸರ್ಕಾರ ವಸತಿಗೃಹ ಮಂಜೂರು ಮಾಡಿದರೆ ಅದರಲ್ಲಿ ವಾಸಿಸುವ ತೀರ್ಮಾನ ಸರ್ಕಾರ್ ಅವರಿಗೇ ಬಿಟ್ಟಿದ್ದು,'' ಎಂದು ಕಚೇರಿ ಕಾರ್ಯದರ್ಶಿ ಹರಿಪಾದ ದಾಸ್ ತಿಳಿಸಿದ್ದಾರೆ. ಸಿಎಂ ಆಗಿದ್ದಾಗಲೂ ತಮ್ಮ ವೇತನವನ್ನು ಪಕ್ಷಕ್ಕೆ ನೀಡುತ್ತಿದ್ದ ಸರ್ಕಾರ್ ಅವರಿಗೆ ಜೀವನ ನಿರ್ವಹಣೆಗೆಂದು ಪಕ್ಷ ಪ್ರತಿ ತಿಂಗಳು 10,000 ನಿರ್ವಹಣಾ ಭತ್ಯೆ ಮಾತ್ರ ನೀಡುತ್ತಿತ್ತು. ಮಾಣಿಕ್ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಸಹೋದರಿಗೆ ಕೊಡುಗೆಯಾಗಿ ನೀಡಿದ್ದಾರೆ. ಸರ್ಕಾರ್ ದಂಪತಿಗೆ ಮಕ್ಕಳಿಲ್ಲ.