ಈ ಬಗ್ಗೆ ಹೇಳಿಕೆ ನೀಡಿರುವ ಆಂಧ್ರ ಪ್ರದೇಶ ವಿತ್ತ ಸಚಿವ ಯನಮಾಲ ರಾಮಕೃಷ್ಣುಡು ಅವರು, ಎನ್ ಡಿಎ ಮೈತ್ರಿಕೂಟದೊಂದಿಗಿನ ನಮ್ಮ ಮೈತ್ರಿ ಸಂಪೂರ್ಣವಾಗಿ ಕಡಿತವಾಗಿಲ್ಲ. ಆದರೆ ಬಿಜೆಪಿಯ ಕೆಲ ನಿರ್ಧಾರಗಳು ನಮಗೆ ತೀವ್ರ ನೋವುಂಟು ಮಾಡಿದೆ. ಇತ್ತ ನಾವು ಆಂಧ್ರ ಪ್ರದೇಶಕ್ಕಾಗಿ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸುತ್ತಿದ್ದರೆ ಅತ್ತ ಅರುಣ್ ಜೇಟ್ಲಿ ಅವರು ಆರ್ಥಿಕ ನೆರವು ನೀಡುವುದಾಗಿ ಹೇಳುವ ಮೂಲಕ ನಮ್ಮ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಹೇಳಿದರು.