ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಪಿಎನ್ ಬಿ ಹಗರಣದ ಕುರಿತು ಹಣಕಾಸು ಸಚಿವರೇಕೆ ಮೌನವಾಗಿದ್ದಾರೆನ್ನುವುದು ಇದೀಗ ಬಹಿರಂಗಗೊಂಡಿದೆ. ಜೇಟ್ಲಿಯವರು ತಮ್ಮ ವಕೀಲರ ಮಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಹಗರಣ ಸಂಬಂಧ ಇತರೆ ಕಾನೂನು ಸಂಸ್ಥೆಯ ಮೇಲೆ ಸಿಬಿಐ ದಾಳಿ ಮಾಡುತ್ತಿದೆ. ಆದರೆ, ಜೇಟ್ಲಿ ಪುತ್ರಿಯ ಸಂಸ್ಥೆಯ ಮೇಲೆ ಏಕೆ ದಾಳಿಯಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.