ನಾನಿನ್ನೂ ಪೂರ್ಣ ಪ್ರಮಾಣದ ರಾಜಕಾರಣಿಯಾಗಿಲ್ಲ: ನಟ ರಜನೀಕಾಂತ್

ನಾನಿನ್ನೂ ಪೂರ್ಣ ಪ್ರಮಾಣದ ರಾಜಕಾರಣಿಯಾಗಿಲ್ಲ. ರಾಜಕೀಯ ಹೇಳಿಕೆ ನೀಡುವ ಸಮಯ ಬಂದಿಲ್ಲ ಎಂದು ನಟ ರಜನೀಕಾಂತ್ ಅವರು ಮಂಗಳವಾರ ಹೇಳಿದ್ದಾರೆ...
ನಟ ರಜನೀಕಾಂತ್
ನಟ ರಜನೀಕಾಂತ್
Updated on
ಹೃಷಿಕೇಶ: ನಾನಿನ್ನೂ ಪೂರ್ಣ ಪ್ರಮಾಣದ ರಾಜಕಾರಣಿಯಾಗಿಲ್ಲ. ರಾಜಕೀಯ ಹೇಳಿಕೆ ನೀಡುವ ಸಮಯ ಬಂದಿಲ್ಲ ಎಂದು ನಟ ರಜನೀಕಾಂತ್ ಅವರು ಮಂಗಳವಾರ ಹೇಳಿದ್ದಾರೆ. 
ಕಾವೇರಿ ವಿವಾದ ಸೇರಿದಂತೆ ತಮಿಳುನಾಡಿನ ಸಮಸ್ಯೆಗಳ ಬಗ್ಗೆ ರಜನೀಕಾಂತ್ ಅವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಸಹ ನಟ ಕಮಲ್ ಹಾಸನ್ ಅವರ ಹೇಳಿಕೆಗೆ ಕೆಲದಿನಗಳ ಕಾಲ ಧ್ಯಾನ ಕೈಗೊಳ್ಳುವುದಕ್ಕಾಗಿ ಉಳಿದುಕೊಂಡಿರುವ ದಯಾನಂದ ಸರಸ್ವತಿ ಆಶ್ರಮದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 
ನಾನು ಇನ್ನೂ ನನ್ನ ಪಕ್ಷವನ್ನು ಘೋಷಿಸಿಲ್ಲ. ಪ್ರಸ್ತುತ ನಾನು ರಾಜಕಾರಣದ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. 
ಹಿಮಾಲಯಕ್ಕೆ ತಾವು ಕೈಗೊಂಡಿರುವ ಆಧ್ಯಾತ್ಮಿಕ ಪ್ರವಾಸ ತನ್ನನ್ನು ತಾನು ಅರಿಯುವುದಕ್ಕಾಗಿ, ರಾಜಕಾರಣ ಆರಂಭಿಸಿರುವುದಕ್ಕೂ ಹಿಮಾಲಯದಲ್ಲಿ ಆಧ್ಯಾತ್ಮ ಪ್ರವಾಸಕ್ಕೂ ಯಾವುದೇ ಸಂಬಂಧ ಇಲ್ಲ. ಮೊದಲ ಬಾರಿಗೆ ನಾನು ಹಿಮಾಲಯಕ್ಕೆ ಆಗಮಿಸುತ್ತಿಲ್ಲ. ನಾನು ಇಲ್ಲಿಗೆ ಹಲವಾರು ಬಾರಿ ಬಂದಿದ್ದೇನೆ ಎಂದು ತಿಳಿಸಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com