ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನೀವು ಹಿಂದೂಗಳಿಗೆ ನೀಡಿದ್ದ ಮಾತನ್ನು ಮರೆತಿದ್ದೀರಿ, ರಾಮಮಂದಿರ ನಿರ್ಮಾಣ ಮತ್ತು ನಾಗರಿಕ ನೀತಿ ಸಂಹಿತೆ ಜಾರಿ ಕುರಿತು ಈ ವರೆಗೂ ಯಾವುದೇ ಆಮೂಲಾಗ್ರ ನಿರ್ಧಾರಗಳು ಸರ್ಕಾರದಿಂದ ಹೊರಬಂದಿಲ್ಲ. ಚುನಾವಣೆಗಳನ್ನು ಗೆಲ್ಲುವುದು ಕೇವಲ ಶೇಕಡಾವಾರು ಮತ ಗಣನೆ, ಮತದಾರರ ಪಟ್ಟಿ ಮತ್ತು ಮತಯಂತ್ರಗಳಷ್ಟೇ.. ಆದರೆ ನೀಡಿದ್ದ ಭರವಸೆಗಳನ್ನೂ ಈಡೇರಿಸುವುದು ಪ್ರಜಾಲಕ್ಷಿ (ನಾಯಕ)ಯ ಗುಣವಾಗಿರುತ್ತದೆ. ನೀವು ನಿಜವಾದ ನಾಯಕ ಎಂಬುದು ನನ್ನ ಭಾವನೆ. ಹೀಗಾಗಿ ನಾನು ನಿಮ್ಮನ್ನು ಕಾಣ ಬಯಸುತ್ತೇನೆ. ನಿಮ್ಮೊಂದಿಗೆ ಸಾಕಷ್ಚು ವಿಚಾರಗಳ ಕುರಿತು ಚರ್ಚಿಸಬೇಕಿದೆ. ದಯಮಾಡಿ ಅಧಿಕಾರದ ಲಾಲಸೆಯಲ್ಲಿ ಜವಾಬ್ದಾರಿ ಮರೆಯಬೇಡಿ, ಅಧಿಕಾರ..ಮತ್ತಷ್ಟು ಅಧಿಕಾರ ಇದು ಜಡತ್ವದ ಪ್ರತೀಕವಾದದೇ ಹೊರತು ದೇಶಕಟ್ಟುವ ಕಾರ್ಯವಲ್ಲ ಎಂದು ತೊಗಾಡಿಯಾ ಹೇಳಿದ್ದಾರೆ.