ಮೂಲಗಳ ಪ್ರಕಾರ ಟಿಡಿಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳಿಗೆ ಜಗನ್ ಪತ್ರ ಬರೆದಿದ್ದು, ಈ ಪೈಕಿ ಎನ್ ಡಿಎ ಮೈತ್ರಿಕೂಟಜದಲ್ಲಿ ಗುರುತಿಸಿಕೊಂಡಿದ್ದ ಟಿಡಿಪಿ ಇದೀಗ ಜಗನ್ ನೋಟಿಸ್ ಗೆ ಬೆಂಬಲ ನೀಡಲು ಸಿದ್ಧ ಎಂದು ಘೋಷಿಸಿದೆ. ಪತ್ರದಲ್ಲಿ ಆಂಧ್ರ ಪ್ರದೇಶದ ಸಂಸದರನ್ನು ಉದ್ದೇಶಿಸಿ ಬರೆದಿರುವ ಜಗನ್, ಒಂದು ವೇಳೆ ಕೇಂದ್ರ ಸರ್ಕಾರ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಹಿಂದೇಟು ಹಾಕಿದರೆ ಆಂಧ್ರ ಪ್ರದೇಶದ ಎಲ್ಲ ಸಂಸದರು ರಾಜಿನಾಮೆ ನೀಡೋಣ. ಇದರ ಮೊದಲ ಭಾಗವಾಗಿ ಇದೇ ಏಪ್ರಿಲ್ 6 ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಎಲ್ಲ 9 ಸಂಸದರು ರಾಜಿನಾಮೆ ನೀಡಲಿದ್ದಾರೆ ಎಂದು ಘೋಷಿಸಿದ್ದಾರೆ.