ರೈತರು ಕೊಯ್ದ ಪೈರಿನ ಕೂಳೆಗಳನ್ನು ದಹಿಸದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಸಹ ಹಲವು ಕ್ರಮಗಳನ್ನು ಕೈಗೊಂಡಿದೆ. ಕೆಲವು ಪ್ರದೇಶಗಳಲ್ಲಿ ಕೊಯ್ದ ಪೈರಿನ ಕೂಳೆಗಳನ್ನು ದಹಿಸುವ ಪದ್ಧತಿ ಇದೆ. ನಾವು ಬೆಳೆ ಬೆಳೆದಾಗ ಮಣ್ಣು, ಗಾಳಿ, ಬೆಳಕುಗಳಿಂದ ಪೌಷ್ಟಿಕಾಂಶ ದೊರೆಯುತ್ತದೆ. ಆದರೆ ಕೊಯ್ದ ಪೈರಿನ ಕೂಳೆಯನ್ನು ದಹನ ಮಾಡುವುದರಿಂದ ಎಲ್ಲಾ ಪೌಷ್ಠಿಕಾಂಶಗಳನ್ನೂ ನಾಶ ಮಾಡುತ್ತಿದ್ದೆವೆ, ಅಷ್ಟೇ ಅಲ್ಲದೇ ಇದರಿಂದ ವಾಯುಮಾಲಿನ್ಯವೂ ಹೆಚ್ಚಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.