ರಾಜ್ಯ ಕೃಷಿ ಇಲಾಖೆಯ ಪ್ರಸ್ತಾಪದ ಆಧಾರದ ಮೇಲೆ ಈ ಸಂಬಂಧ ಮಾರ್ಚ್ 21 ರಂದು ಕೇರಳ ಸರ್ಕಾರ ಅಧಿಕೃತ ಘೋಷಣೆ ಮಾಡಲಿದೆ. ದೇಶ ವಿದೇಶಗಳಲ್ಲಿ ಕೇರಳ ಹಲಸನ್ನು ಬ್ರಾಂಡ್ ಸ್ವರೂಪ ನೀಡಿ ಉತ್ತೇಜಿಸಿಅಲು ಸರ್ಕಾರವು ಯೋಜಿಸಿದೆ, ಈ ಮೂಲಕ ಹಲಸಿನ ಜೈವಿಕ ಮತ್ತು ಪೌಷ್ಟಿಕ ಗುಣಗಳನ್ನು ಎತ್ತಿ ತೋರುವುದು, ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟಕ್ಕೆ ಅನುಕೂಲ ಕಲ್ಪಿಸಿಕೊಡುವುದು ಸರ್ಕಾರದ ಪ್ರಮುಖ ಉದ್ದೇಶ ಎಂದು ಕೇರಳ ಕೃಷಿ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.