ತಿರುಪತಿ ಹುಂಡಿ ಲೆಕ್ಕ ಹಾಕುವವರು ಕೂಡ ನಿಮಗಿಂತ ವೇಗವಾಗಿ ಹಣ ಎಣಿಸುತ್ತಾರೆ: ಆರ್ ಬಿಐ, ಕೇಂದ್ರದ ವಿರುದ್ಧ ಚಿದಂಬರಂ ವಾಗ್ದಾಳಿ

ನೋಟು ನಿಷೇಧ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರು, ತಿರುಪತಿ ಹುಂಡಿ ಲೆಕ್ಕ ಹಾಕುವವರು ಕೂಡ ನಿಮಗಿಂತ ವೇಗವಾಗಿ ಹಣ ಎಣಿಸುತ್ತಾರೆ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ನೋಟು ನಿಷೇಧ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರು, ತಿರುಪತಿ ಹುಂಡಿ ಲೆಕ್ಕ ಹಾಕುವವರು ಕೂಡ ನಿಮಗಿಂತ ವೇಗವಾಗಿ ಹಣ ಎಣಿಸುತ್ತಾರೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ 84ನೇ ಮಹಾಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಚಿದಂಬರಂ, "ಅಮಾನ್ಯಗೊಂಡ 500, 1000 ರೂ, ಮುಖಬೆಲೆಯ ನೋಟುಗಳನ್ನು ಇದುವರೆಗೂ ಲೆಕ್ಕ ಹಾಕಲು ಆರ್ ಬಿಐ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ತಿರುಪತಿಯ ಹುಂಡಿ ಲೆಕ್ಕ ಹಾಕುವವರು ನಿಮಗಿಂತ ವೇಗವಾಗಿ ಹಣ ಲೆಕ್ಕಿಸುತ್ತಾರೆ. ಈ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರ ಏನು ಮಾಡಿತು" ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
ಇನ್ನು ನೋಟು ಅಮಾನ್ಯಗೊಂಡ ಬಳಿಕ ಈ ವರೆಗೂ ಆರ್ ಬಿಐ ಸೇರಿರುವ ಹಳೆಯ ನೋಟುಗಳ ಪ್ರಮಾಣವೆಷ್ಟು ಎಂಬುದರ ಕುರಿತು ಆರ್ ಬಿಐ ಖಚಿತ ಮಾಹಿತಿ ನೀಡಿಲ್ಲ. ಹೀಗಾಗಿ ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ಅಮಾನ್ಯಗೊಂಡ 500 ಹಾಗು 1000 ರೂ. ಮುಖಬೆಲೆಯ ನೋಟುಗಳನ್ನು ಲೆಕ್ಕ ಹಾಕಲು 66 ಸಿವಿಪಿಎಸ್ ಮಷಿನ್ ಗಳನ್ನು ಬಳಸಲಾಗುತ್ತಿದೆ ಎಂದು ಆರ್ ಬಿಐ ಹೇಳಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com