ದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ 84ನೇ ಮಹಾಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಚಿದಂಬರಂ, "ಅಮಾನ್ಯಗೊಂಡ 500, 1000 ರೂ, ಮುಖಬೆಲೆಯ ನೋಟುಗಳನ್ನು ಇದುವರೆಗೂ ಲೆಕ್ಕ ಹಾಕಲು ಆರ್ ಬಿಐ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ತಿರುಪತಿಯ ಹುಂಡಿ ಲೆಕ್ಕ ಹಾಕುವವರು ನಿಮಗಿಂತ ವೇಗವಾಗಿ ಹಣ ಲೆಕ್ಕಿಸುತ್ತಾರೆ. ಈ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರ ಏನು ಮಾಡಿತು" ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.