ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು, ಎಂಎಂ ಕಲಬುರ್ಗಿ ಹತ್ಯೆ ಪ್ರಕರಣವು ಎನ್ಐಎ ತನಿಖೆಯ ವ್ಯಾಪ್ತಿಗೆ ಬರುವುದಿಲ್ಲವೆಂಬ ಕೇಂದ್ರದ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎನ್ಐಎ ಪ್ರಕರಣಗಳನ್ನ ಕೈಗೆತ್ತಿಕೊಳ್ಳುವುದರಲ್ಲಿಯೂ ತಾರತಮ್ಯವಾಗುತ್ತಿದೆ. ರುದ್ರೇಶ್ ಪ್ರಕರಣವನ್ನು ಎನ್ಐಎ ವಹಿಸಿಕೊಂಡಿತು. ಅದರೆ, ಕಲಬುರ್ಗಿ ಪ್ರಕರಣ ಬೇಡ ಎನ್ನುತ್ತದೆ. ಮುಸ್ಲಿಮ್ ಉಗ್ರವಾದ, ಹಿಂದೂ ಉಗ್ರವಾದ ಎರಡೂ ಒಂದೇ ಅಲ್ಲವಾ? ಎಂದು ಪ್ರಶ್ನಿಸಿದ್ದಾರೆ.