ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಘುರಾಮ್ ರಾಜನ್ ಅವರು, ಅತ್ಯುತ್ತಮ ಆರೋಗ್ಯಕರ ಚರ್ಚೆಗಳಿಗೆ ವಿಶ್ವವಿದ್ಯಾಲಯಗಳು ಅತ್ಯುತ್ತಮ ವೇದಿಕೆಗಳಾಗಿವೆ. ಹೀಗಾಗಿ ವಿಶ್ವ ವಿದ್ಯಾಲಯಗಳನ್ನು ಗೌರವಿಸಬೇಕು. ಎಲ್ಲರೂ ಮತ್ತೊಬ್ಬರ ಚಿಂತನೆಗಳನ್ನು ಆಲಿಸಬೇಕು ಮತ್ತು ಗೌರವಿಸಬೇಕು. ಆಗ ಮಾತ್ರ ಉತ್ತಮ ತಯಾರಿಕೆ ಹೊರಬರುತ್ತದೆ. ಹೀಗಾಗಿ ಯಾರಿಗೂ ಯಾರೂ 'ರಾಷ್ಟ್ರ ವಿರೋಧಿ' ಪಟ್ಟ ನೀಡಬಾರದು ಎಂದು ಹೇಳಿದರು.