ವಿಶ್ವ ವಿದ್ಯಾಲಯಗಳಲ್ಲಿ 'ರಾಷ್ಟ್ರ ವಿರೋಧಿ' ಪಟ್ಟ ಸಲ್ಲದು: ರಘುರಾಮ್ ರಾಜನ್

ವಿಶ್ವ ವಿದ್ಯಾಲಯಗಳಲ್ಲಿ 'ರಾಷ್ಟ್ರ ವಿರೋಧಿ' ಪಟ್ಟ ಸಲ್ಲದು ಎಂದು ಮಾಜಿ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಶನಿವಾರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ವಿಶ್ವ ವಿದ್ಯಾಲಯಗಳಲ್ಲಿ 'ರಾಷ್ಟ್ರ ವಿರೋಧಿ' ಪಟ್ಟ ಸಲ್ಲದು ಎಂದು ಮಾಜಿ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಶನಿವಾರ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಘುರಾಮ್ ರಾಜನ್ ಅವರು, ಅತ್ಯುತ್ತಮ ಆರೋಗ್ಯಕರ ಚರ್ಚೆಗಳಿಗೆ ವಿಶ್ವವಿದ್ಯಾಲಯಗಳು ಅತ್ಯುತ್ತಮ ವೇದಿಕೆಗಳಾಗಿವೆ. ಹೀಗಾಗಿ ವಿಶ್ವ ವಿದ್ಯಾಲಯಗಳನ್ನು ಗೌರವಿಸಬೇಕು. ಎಲ್ಲರೂ ಮತ್ತೊಬ್ಬರ ಚಿಂತನೆಗಳನ್ನು ಆಲಿಸಬೇಕು ಮತ್ತು ಗೌರವಿಸಬೇಕು. ಆಗ ಮಾತ್ರ ಉತ್ತಮ ತಯಾರಿಕೆ ಹೊರಬರುತ್ತದೆ. ಹೀಗಾಗಿ ಯಾರಿಗೂ ಯಾರೂ 'ರಾಷ್ಟ್ರ ವಿರೋಧಿ' ಪಟ್ಟ ನೀಡಬಾರದು ಎಂದು ಹೇಳಿದರು.
ಇದೇ ವೇಳೆ ಚಿಕಾಗೋ ವಿವಿ ಘಟನೆಯೊಂದನ್ನು ನೆನಪಿಸಿಕೊಂಡ ರಾಜನ್, ಅಂದಿನ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಮುಖ್ಯ ಕಾರ್ಯತಂತ್ರಜ್ಞ ಸ್ಟೀವ್ ಬ್ಯಾನನ್ ಪಾಲ್ಗೊಂಡಿದ್ದರು. ಅಂದು ಅವರ ವಿಚಾರಧಾರೆಗಳು ಇಷ್ಟವಿರದೇ ಇದ್ದರೂ ಅಲ್ಲಿ ನೆರೆದಿದ್ದವರು ಅವರ ಭಾಷಣ ಆಲಿಸಿದ್ದರು. ನಾವು ಮೊದಲು ಅಂತಹ ಗೌರವವನ್ನು ಕಲಿಯಬೇಕಿದೆ. ನಿಮಗೆ ಒಬ್ಬರ ವಿಚಾರಧಾರೆ ಇಷ್ಟವಿಲ್ಲ ಎಂದಾದರೇ ಅವರ ಸಿದ್ಧಾಂತಗಳನ್ನು ಪಾಲಿಸಬೇಡಿ. ಅದನ್ನು ಬಿಟ್ಟು ಅವರ ಭಾಷಣಕ್ಕೆ ಅಡ್ಡಿ ಪಡಿಸಬೇಡಿ. ಚರ್ಚೆಗೆ ಅಡ್ಡಿ ಪಡಿಸದೇ ಆರೋಗ್ಯಕರ ಚರ್ಚೆಗೆ ಅವಕಾಶ ಮಾಡಿಕೊಡಿ. ನಿಮಗಿಷ್ಟವಿಲ್ಲ ಎಂದ ಮಾತ್ರಕ್ಕೇ ರಾಷ್ಟ್ರ ವಿರೋಧಿ ಪಟ್ಟ ಕಟ್ಟುವುದು ಸರಿಯಲ್ಲ ಎಂದು ರಘುರಾಮ್ ರಾಜನ್ ಕಿವಿಮಾತು ಹೇಳಿದರು.
ನಾವು ಮುಂದಿನ ಪೀಳಿಗೆಗೆ ಒಂದು ಅತ್ಯುತ್ತಮ ಚರ್ಚೇ ವೇದಿಕೆ ಸೃಷ್ಟಿಸಬೇಕಿದೆ. ಅಲ್ಲಿ ಯಾವುದೇ ವಿಚಾರ ನಿರ್ಭೀತಿಯಿಂದ, ಆರೋಗ್ಯಕರ ಚರ್ಚೆಗೆ ಒಳಗಾಗಬೇಕು. ಅಲ್ಲಿನವರು ಸ್ವತಂತ್ರ್ಯವನ್ನು ಬಳಕೆ ಮಾಡಬೇಕೇ ಹೊರತು ಪರವಾನಗಿಯನ್ನಲ್ಲ. ಸಾಮಾಜದ ಬೆಳವಣಿಗೆ ಅನುಕೂಲವಾಗುವಂತಹ ಚರ್ಚೆಗಳಿಗೆ ಅವಕಾಶ ನೀಡಿ ಎಂದು ರಘುರಾಮ್ ರಾಜನ್ ಮನವಿ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com