ಅಧಿಕೃತ ಮೂಲಗಳ ಪ್ರಕಾರ, ಬಿಜೆಪಿಯನ್ನು ಮಣಿಸಲು ಎಸ್ ಪಿಯೊಂದಿಗಿನ ಮೈತ್ರಿ ಅಗತ್ಯವಿದೆ ಎಂದು ಪಕ್ಷದ ಶಾಸಕರಿಗೆ ಮಾಯಾವತಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿಯ ಷಡ್ಯಂತ್ರಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿ ಏನೇ ನಕಾರಾತ್ಮಕವಾಗಿ ಹೇಳಿದ್ದರೂ ಅದು ನಮ್ಮ ಮೈತ್ರಿಯ ಬಗ್ಗೆ ಇರುವ ಭಯ ಎಂದು ಮಾಯಾವತಿ ಹೇಳಿದ್ದಾರೆ.