ಛತರ್ಪುರ: ಜೊತೆಯಲ್ಲಿ ಊಟ ಮಾಡಿದಾಕ್ಷಣ ದಲಿತರನ್ನು ಶುದ್ಧೀಕರಿಸಲು ನಾನು ಭಗವಾನ್ ಶ್ರೀರಾಮ ಅಲ್ಲ ಎಂದು ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಉಮಾ ಭಾರತಿಯವರು ಮಂಗಳವಾರ ಹೇಳಿದ್ದಾರೆ.
ಮಧ್ಯಪ್ರದೇಶದ ಛತರ್ಪುರ ಜಿಲ್ಲೆಯಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿರುವ ಉಮಾ ಭಾರತಿಯವರು, ಜೊತೆಗೆ ಊಟ ಮಾಡಿದ ಕೂಡಲೇ ದಲಿತರನ್ನು ಶುದ್ಧೀಕರಿಸಲು ನಾನು ಭಗವಾನ್ ಶ್ರೀ ರಾಮ ಅಲ್ಲ. ದಲಿತರೇ ನಮ್ಮ ಮನೆಗೆ ಬಂದು ಜೊತೆಜೊತೆಗೆ ಆಹಾರ ಸೇವಿಸಿದರೆ, ಆಗ ಅವರು ಶುದ್ಧೀಕರಣಗೊಳ್ಳುತ್ತಾರೆಂದು ಹೇಳಿದ್ದಾರೆ.
ದಲಿತರು ನನ್ನ ಮನೆಗೆ ಬಂದಾಗ, ಅವರಿಗೆ ನನ್ನ ಕೈಗಳಿಂದ ಸೇವೆ ಮಾಡಿದರೆ ನನ್ನ ಮನೆಗೆ ಒಳ್ಳೆಯದಾಗುತ್ತದೆ. ನಮ್ಮ ಕೈಯಿಂದ ದಲಿತರಿಗೆ ಆಹಾರ ಕೊಟ್ಟಾಗ ದಲಿತರು ಸ್ವಯಂ ಶುದ್ಧಗೊಳ್ಳುತ್ತಾರೆಂದು ತಿಳಿಸಿದ್ದಾರೆ.