ಹಿಮಾಚಲಪ್ರದೇಶದ ಕಸೌಲಿಯಲ್ಲಿ ಮಹಿಳಾ ಅಧಿಕಾರಿ ಹತ್ಯೆ: ಮಥುರಾದಲ್ಲಿ ಆರೋಪಿ ಬಂಧನ

ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಎರಡು ದಿನಗಳ ಹಿಂದೆ ಕರ್ತವ್ಯ ನಿರತ ಮಹಿಳಾ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಆರೋಪಿಯನ್ನು ಉತ್ತರಪ್ರದೇಶದ ಮಥುರಾದಲ್ಲಿ ಪೊಲೀಸರು ಬಂಧಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಸೌಲಿ: ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಎರಡು ದಿನಗಳ ಹಿಂದೆ ಕರ್ತವ್ಯ ನಿರತ ಮಹಿಳಾ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಆರೋಪಿಯನ್ನು ಉತ್ತರಪ್ರದೇಶದ ಮಥುರಾದಲ್ಲಿ ಪೊಲೀಸರು ಬಂಧಿಸಿದ್ದಾರೆ. 
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹೊಟೇಲ್ ಒಂದು ಒತ್ತುವರಿ ಮಾಡಿರುವ ಜಮೀನು ತೆರವು ಮಾಡಲು ಜಿಲ್ಲಾ ನಗರ ಮತ್ತು ಪಟ್ಟಣ ಸಹಾಯಕ ಅಧಿಕಾರಿ ಶೈಲ್ ಬಾಲಾ ಶರ್ಮಾ ಮೇಲೆ ಹೊಟೇಲ್ ಮಾಲೀಕ 54 ವರ್ಷದ ವಿಜಯ್ ಸಿಂಗ್ ಗುಂಡು ಹಾರಿಸಿ ಪರಾರಿಯಾಗಿದ್ದ. 
ಆರೋಪಿಯನ್ನು ಪತ್ತೆಗೆ ಮುಂದಾದ ಪೊಲೀಸರು ಎರಡು ದಿನಗಳ ನಂತರ ಅಂತೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
ಮಹಿಳಾ ಅಧಿಕಾರಿ ಹತ್ಯೆ ಪ್ರಕರಣವನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿ ನೀವು ಜನರನ್ನು ಕೊಲ್ಲುತ್ತಾ ಹೋದರೆ ನಾವು ಆದೇಶ ನೀಡುವುದನ್ನು ನಿಲ್ಲಿಸುತ್ತೇವೆ ಎಂದು ನ್ಯಾಯಮೂರ್ತಿ ಎಂಬಿ ಲೋಕುರ್, ನ್ಯಾ. ದೀಪಕ್ ಗುಪ್ತಾ ಅವರನ್ನೊಳಗೊಂಡ ವಿಭಾಗೀಯ ಪೀಠ ಪ್ರಶ್ನಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com