ಕೋಲ್ಕತ್ತಾದಲ್ಲಿ ನೇತಾಜಿ ಪ್ರತಿಮೆ ಧ್ವಂಸ: ಪ್ರತಿಭಟನೆ

ಪ್ರತಿಮೆ ಭಂಜನೆ ಪ್ರಕರಣಗಳು ಮುಂದುವರೆದಿದ್ದು, ಕೋಲ್ಕತ್ತಾದಲ್ಲಿ ಸುಭಾಷ್ ಚಂದ್ರ ಬೋಸರ ಪ್ರತಿಮೆಯನ್ನು ಧ್ವಂಸಮಾಡಲಾಗಿದೆ.
ಕೋಲ್ಕತ್ತಾದಲ್ಲಿ ನೇತಾಜಿ ಪ್ರತಿಮೆ ಧ್ವಂಸ: ಪ್ರತಿಭಟನೆ
ಕೋಲ್ಕತ್ತಾದಲ್ಲಿ ನೇತಾಜಿ ಪ್ರತಿಮೆ ಧ್ವಂಸ: ಪ್ರತಿಭಟನೆ
Updated on
ಕೋಲ್ಕತ್ತಾ: ಪ್ರತಿಮೆ ಭಂಜನೆ ಪ್ರಕರಣಗಳು ಮುಂದುವರೆದಿದ್ದು, ಕೋಲ್ಕತ್ತಾದಲ್ಲಿ ಸುಭಾಷ್ ಚಂದ್ರ ಬೋಸರ ಪ್ರತಿಮೆಯನ್ನು ಧ್ವಂಸಮಾಡಲಾಗಿದೆ. 
ಕೋಲ್ಕತ್ತಾದ ಉತ್ತರ ಭಾಗದಲ್ಲಿರುವ ಪಾರ್ಕ್ ನಲ್ಲಿದ್ದ ಸುಭಾಷ್ ಚಂದ್ರ ಬೋಸರ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದು, ಸ್ಥಳೀಯರು, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ನ ಪಶ್ಚಿಮ ಬಂಗಾಳ ಪ್ರಧಾನ ಕಾರ್ಯದರ್ಶಿ ನರೇನ್ ಚಟ್ಟೋಪಾಧ್ಯಾಯ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. 
ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದು, ಪ್ರಕರಣ ದಾಖಲಿಸಲಾಗಿದೆ. " ಹಾನಿಗೊಳಗಾಗಿರುವ ಪ್ರತಿಮೆಯನ್ನು ಮುಚ್ಚಲಾಗಿದೆ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಕೋಲ್ಕತ್ತಾದಲ್ಲಿರುವ ಭಾರತೀಯ ಜನಸಂಘದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪ್ರತಿಮೆಗೂ ಮಾರ್ಚ್ ತಿಂಗಳಲ್ಲಿ ಹಾನಿ ಮಾಡಲಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com