ರಾಜಸ್ಥಾನದಲ್ಲಿ ಭರತ್ ಪುರ ಹಾಗೂ ಉತ್ತರ ಪ್ರದೇಶದಲ್ಲಿ ಆಗ್ರಾ ಜಿಲ್ಲೆಗಳು ಅತಿ ಹೆಚ್ಚಿನ ಹಾನಿಗೆ ಗುರಿಯಾಗಿವೆ. ಸಾವಿರಾರು ಮರ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ಮೂರೂ ರಾಜ್ಯಗಳ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರೈಲು, ಬಸ್ ಸಂಚಾರ, ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ದೈನಂದಿನ ಸೇವೆಗಳೂ ವ್ಯತ್ಯಯವಾಗಿವೆ. ಜತೆಗೆ ಹಲವು ನಗರಗಳಲ್ಲಿ ದಿನವಿಡೀ ಧೂಳು ಮಿಶ್ರಿತ ಬಿರುಸಿನ ಗಾಳಿ ಬೀಸಿದ್ದರಿಂದ ದೈನಂದಿನ ವಹಿವಾಟಿಟು ಭಾಗಶಃ ಸ್ಥಗಿತಗೊಂಡಿದೆ.