ದಲಿತರ ಮನೆಯಲ್ಲಿ ಇಡೀ ರಾತ್ರಿ ಸೊಳ್ಳೆ ಕಚ್ಚುತ್ತವೆ: ಉತ್ತರ ಪ್ರದೇಶ ಸಚಿವೆಯ ಹೇಳಿಕೆ

ಉತ್ತರ ಪ್ರದೇಶದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಡಿನ್ನರ್ ವಿತ್ ದಲಿತ್ಸ್ ಅಭಿಯಾನದಿಂದ ಪಕ್ಷಕ್ಕೆ ಮುಜುಗರ ಉಂಟಾಗುವ ರೀತಿಯ ಮತ್ತೊಂದು ಘಟನೆ ನಡೆದಿದ್ದು, ದಲಿತರ ಮನೆಯಲ್ಲಿ ಇಡೀ ರಾತ್ರಿ ಸೊಳ್ಳೆಗಳು
ದಲಿತರ ಮನೆಯಲ್ಲಿ ಇಡೀ ರಾತ್ರಿ ಸೊಳ್ಳೆ ಕಚ್ಚುತ್ತವೆ: ಉತ್ತರ ಪ್ರದೇಶ ಸಚಿವೆಯ ವಿವಾದಾತ್ಮಕ ಹೇಳಿಕೆ
ದಲಿತರ ಮನೆಯಲ್ಲಿ ಇಡೀ ರಾತ್ರಿ ಸೊಳ್ಳೆ ಕಚ್ಚುತ್ತವೆ: ಉತ್ತರ ಪ್ರದೇಶ ಸಚಿವೆಯ ವಿವಾದಾತ್ಮಕ ಹೇಳಿಕೆ
ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಡಿನ್ನರ್ ವಿತ್ ದಲಿತ್ಸ್ ಅಭಿಯಾನದಿಂದ ಪಕ್ಷಕ್ಕೆ ಮುಜುಗರ ಉಂಟಾಗುವ ರೀತಿಯ ಮತ್ತೊಂದು ಘಟನೆ ನಡೆದಿದ್ದು, ದಲಿತರ ಮನೆಯಲ್ಲಿ ಇಡೀ ರಾತ್ರಿ ಸೊಳ್ಳೆಗಳು ಕಚ್ಚುತ್ತವೆ ಎಂದು ಉತ್ತರ ಪ್ರದೇಶ ಶಿಕ್ಷಣ ಸಚಿವೆ ಅನುಪಮ ಜೈಸ್ವಾಲ್ ಹೇಳಿದ್ದಾರೆ.
ಸರ್ಕಾರದ ಯೋಜನೆಗಳು ದಲಿತರನ್ನು ತಲುಪುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಮಾತನಾಡುತ್ತಿದ್ದ ಉತ್ತರ ಪ್ರದೇಶ ಶಿಕ್ಷಣ ಸಚಿವೆ ಅನುಪಮ ಜೈಸ್ವಾಲ್, ಸಮಸ್ಯೆಗಳ ನಡುವೆಯೂ ಸರ್ಕಾರದ ಯೋಜನೆಗಳನ್ನು ದಲಿತರಿಗೆ ತಲುಪಿಸುತ್ತಿರುವುದಕ್ಕೆ ಸಂತೃಪ್ತಿ ಇದೆ ಎಂದು ಹೇಳಿದ್ದಾರೆ. 
ಸರ್ಕಾರದ ಯೋಜನೆಗಳು ಸರಿಯಾಗಿ ತಲುಪುತ್ತಿವೆ.  ಫಲಾನುಭವಿಗಳ ಮನೆಗಳಿಗೆ ತೆರಳುತ್ತಿರುವ ಸಚಿವರು ರಾತ್ರಿ ಇಡೀ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತಾರೆ. ಆದರೆ ಅವೆಲ್ಲಕ್ಕಿಂತ ಸಚಿವರುಗಳಿಗೆ ಉತ್ತಮ ಅನುಭವ ಸಿಗುತ್ತಿದೆ.  ಸಚಿವರುಗಳಿಗೆ ಎರಡು ಕ್ಷೇತ್ರಗಳಲ್ಲಿ ಸರ್ಕಾರದ ಯೋಜನೆಗಳನ್ನು ತಲುಪಿಸುವ ಜವಾಬ್ದಾರಿ ನೀಡಿದರೆ ನಾಲ್ಕು ಕ್ಷೇತ್ರಗಳಿಗೆ ತೆರಳುತ್ತೇನೆಂಬ ವಿಶ್ವಾಸ ಕಾಣಿಸುತ್ತಿದೆ.  ಕೆಲಸಗಳಲ್ಲಿ ತೃಪ್ತಿ ಕಾಣಿಸುತ್ತಿದೆ. ನಾನೂ ಸಹ ನನಗೆ ವಹಿಸಿರುವ ಮನೆಗಳಿಗಿಂತ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳು ತಲುಪುತ್ತಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತಿದ್ದೇನೆ ಎಂದು ಅನುಪಮ ಜೈಸ್ವಾಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com