ಅನಾರೋಗ್ಯದಿಂದಾಗಿ ಸಚಿವ ಅರುಣ್ ಜೇಟ್ಲಿಯವರು ಕಳೆದ ಏಪ್ರಿಲ್ ತಿಂಗಳಿನಿಂದ ಗೈರು ಹಾಜರಾಗಿದ್ದಾರೆ. ಇದರಂತೆ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಹಸ್ಮುಖ್ ಆದಿಯಾ ಅವರು ಕೂಡ ತಮ್ಮ ಆಧ್ಯಾತ್ಮಿಕ ಗುರವಿನೊಂದಿಗೆ ಆತ್ಮ ಶಾಂತಿಯನ್ನು ಅರಸಿ ಮೈಸೂರಿಗೆ ತೆರಳಲು ಮೇ.20ರವರೆಗೂ ರಜೆ ಪಡೆದುಕೊಂಡಿದ್ದಾರೆ. ಹೀಗಾಗಿ ನಾನು ಕೇಂದ್ರ ಹಣಕಾಸು ಸಚಿವಾಲಯವನ್ನು ಮುಚ್ಚಲು ನಿರ್ಧರಿಸಿದ್ದೇನೆ. ಪ್ರಧಾನಮಂತ್ರಿಗಳ ಕಚೇರಿ ಈ ಮೊದಲಿನಂತೆಯೇ ಎಲ್ಲಾ ಹಣಕಾಸು ನೀತಿಗಳ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.