ದೆಹಲಿಯ ಪಕ್ಷದ ಕಚೇರಿಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಕೆಲವರು ಬಿಜೆಪಿಯನ್ನು ಉತ್ತರ ಭಾರತದ ಪಕ್ಷವೆಂದು, ಹಿಂದಿ ಪಕ್ಷವೆಂಬ ಭಾವನೆಯನ್ನು ಸೃಷ್ಠಿಸಿದ್ದರು, ಆದರೆ ಈ ರೀತಿಯ ಸುಳ್ಳು ಹಬ್ಬಿಸುತ್ತಿದ್ದವರಿಗೆ ಇಂದು ಕರ್ನಾಟಕದ ಜನತೆ ಉತ್ತರ ನೀಡಿದ್ದಾರೆ, ನಾನು ಕರ್ನಾಟಕಕ್ಕೆ ಹೋದಾಗ ಅಲ್ಲಿನ ಜನತೆ ಭಾಷೆಯ ವಿಷಯವಾಗಿ ಎಂದೂ ತಾರತಮ್ಯ ಮಾಡಿಲ್ಲ, ಅಷ್ಟು ಪ್ರೀತಿ ತೋರಿದ್ದಾರೆ ಎಂದು ಮೋದಿ ಹೇಳಿದ್ದಾರೆ.