ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಚಿದಂಬರಂ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿಯ ಕುದುರೆ ವ್ಯಾಪರಕ್ಕೆ ಬಗ್ಗದೇ ತಮ್ಮ ತಮ್ಮ ಪಕ್ಷಗಳ ಪರ ನಿಂತಿದ್ದಾರೆ, ಆ ಮೂಲಕ ಪ್ರಜೆಗಳ ಆದೇಶವನ್ನು ಎತ್ತಿ ಹಿಡಿದಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ವಿಶ್ವಾಸ ಮತ ಪ್ರಕ್ರಿಯೆ ಕೇವಲ ಯಾವ ಪಕ್ಷ ಸರ್ಕಾರ ರಚನೆ ಮಾಡುತ್ತದೆ ಎಂಬುದರ ಕುರಿತು ಮಾತ್ರವಲ್ಲ. ಬದಲಿಗೆ ಯಾವ ಶಾಸಕರು ಪ್ರಜೆಗಳ ಆದೇಶಕ್ಕೆ ಮನ್ನಣೆ ನೀಡುತ್ತಿದ್ದಾರೆ. ಪ್ರಜಾಪ್ರಭುತ್ವ ಮತ್ತು ತಮ್ಮ ಆರಿಸಿದ ಮತದಾರನಿಗೆ ಎಷ್ಟು ನಿಯತ್ತಾಗಿದ್ದಾರೆ ಎಂಬ ವಿಚಾರದ ಸ್ಪಷ್ಟನೆ ಎಂದು ಚಿದಂಬರಂ ವಿಶ್ಲೇಷಿಸಿದ್ದಾರೆ.