ತಮಿಳು ನಾಡಿನ ಮಧುಮಿತಾ ತನ್ನ ಪತಿಯಿಂದ ವಿಚ್ಚೇದನ ಪಡೆದುಕೊಂಡಿದ್ದರು. ಹೀಗೆ ವಿಚ್ಚೇದನ ಪಡೆದ ಬಳಿಕ ಆಕೆ ಕೃತಕ ಗರ್ಭದಾರಣೆ ಮೂಲಕವಾಗಿ 2017ರ ಏಪ್ರಿಲ್ ನಲ್ಲಿ ಹೆಣ್ಣು ಮಗುವಿನ ತಾಯಿಯಾದರು. ಮಗುವಿಗೆ ತಾವಿಶಿ ಪೆರಾರ ಎಂದು ನಾಮಕರಣ ಮಾಡಲಾಗಿತ್ತು. ಆ ವೇಳೆ ತಿರುಚ್ಚಿಯ ನಗರಪಾಲಿಕೆ ಅಧಿಕಾರಿಗಳು ಮಗುವಿನ ಜನನ ಪ್ರಮಾಣ ಪತ್ರದಲ್ಲಿ ಮಧುಮಿತಾ ಅವರ ಹೆರಿಗೆ ಸಂದರ್ಭ ಸಹಕಾರ ನೀಡಿದ್ದ ಮನೀಶ್ ಎನ್ನುವವರ ಹೆಸರನ್ನು ನಮೂದಿಸಿದ್ದರು. ಆದರೆ ಮಧುಮಿತಾ ಮಗುವಿನ ತಂದೆ ಹೆಸರಿರುವ ಜಾಗದಲ್ಲಿ ಮನೀಶ್ ಹೆಸರು ಬೇಡ, ಅದನ್ನು ತೆಗೆದುಹಾಕಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಅಧಿಕಾರಿಗಳು ಂಆತ್ರ ಈ ಮನವಿಯನ್ನು ನಿರಾಕರಿಸಿದ್ದರು. ಈ ಕಾರಣಕ್ಕಾಗಿ ಮಧುಮಿತಾ ನ್ಯಾಯಾಲಯದ ಮೊರೆ ಹೊಕ್ಕರು.