ಪಾಕಿಸ್ತಾನ ತನ್ನ ದುರ್ನಡತೆ ಪ್ರದರ್ಶಿಸಿದ್ದ ಹಿನ್ನಲೆಯಲ್ಲಿ ಮೇ.19 ರಂದು ಭಾರತೀಯ ಸೇನೆ ತಕ್ಕ ಪಾಠವನ್ನು ಕಲಿಸಿದ್ದು, ಅಂತರಾಷ್ಟ್ರೀಯ ಗಡಿಯಲ್ಲಿದ್ದ ಪಾಕಿಸ್ತಾನ ಸೇನೆ 4 ಬಂಕರ್ ಗಳನ್ನು ಧ್ವಂಸಗೊಳಿಸಿತ್ತು. ಇದಕ್ಕೆ ಹೆದರಿದ ಪಾಕಿಸ್ತಾನ ಸೇನೆ, ಶಾಂತಿ ಕಾಪಾಡಲು ಬದ್ಧವಾಗಿದ್ದೇವೆಂದು ತಿಳಿಸಿತ್ತು. ಇದೀಗ ಮತ್ತೆ ತನ್ನ ಉದ್ಧಟತನವನ್ನು ಪ್ರದರ್ಶಿಸಲು ಪಾಕಿಸ್ತಾನ ಆರಂಭಿಸಿದೆ.