ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಶುಕ್ರವಾರ ಒಡಿಶಾ ಮತ್ತು ಮಿಜೋರಾಮ್ ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಿಸಿ ಆದೇಶಿಸಿದ್ದಾರೆ.
ಒಡಿಶಾ ರಾಜ್ಯಪಾಲರಾಗಿ ಪ್ರೊ. ಗಣೇಶಿ ಲಾಲ್ ನೇಮಕವಾಗಿದ್ದಾರೆ. ಇನ್ನು ಕುಮ್ಮಮಾನಂ ರಾಜಶೇಖರನ್ ಅವರು ಮಿಜೋರಾಂ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಲೆ. ಜ. ನಿರ್ಭಯ್ ಶರ್ಮಾ ಅವರ ಅಧಿಕಾರಾವಧಿ ಮೇ 28ಕ್ಕೆ ಮುಗಿಯಲಿದ್ದು ಅವರ ಸ್ಥಾನಕ್ಕೆ ರಾಜಶೇಖರನ್ ನೇಮಕವಾಗಿದೆ.
ಪ್ರಸ್ತುತ ರಾಜಶೇಖರನ್ ಭಾರತೀಯ ಜನತಾ ಪಕ್ಷದ ಕೇರಳ ಘಟಕರ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.