ನವದೆಹಲಿ: ದೆಹಲಿ- ಮೀರತ್ ಎಕ್ಸ್ ಪ್ರೆಸ್ ವೇ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿಂದು ಉದ್ಘಾಟಿಸಿದರು. ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದೆಹಲಿಯ ನಿಜಾಮುದ್ದೀನ್ ಸೇತುವೆಯಿಂದ ಉತ್ತರ ಪ್ರದೇಶದ ಗಡಿಯವರೆಗೂ ನಿರ್ಮಾಣವಾಗಿರುವ 14 ಪಥದ ಈ ಹೆದ್ದಾರಿಯಿಂದ ಎರಡು ನಗರದ ಪ್ರಯಾಣದ ಅವಧಿ ಕಡಿಮೆಯಾಗಲಿದೆ. ಪ್ರಸ್ತುತ 45 ನಿಮಿಷಗಳಲ್ಲಿ ಸಂಪರ್ಕಿಸಬಹುದಾಗಿದೆ. ಮೊದಲು ನಾಲ್ಕರಿಂದ ಐದು ಗಂಟೆ ಅಗತ್ಯವಾಗಿತ್ತು.
Advertisement