ಮೂಲಗಳ ಪ್ರಕಾರ, ನೌಕರ ಕೆಲಸದ ಬಗ್ಗೆ ಅನುಮಾನಗೊಂಡಿದ್ದ ನಾಗರಿಕ ನ್ಯಾಯಾಧೀಶೆ ಆತನ ಚಲನವಚನವನ್ನು ಗಮನಿಸುವ ಸಲುವಾಗಿ ಕಚೇರಿಯಲ್ಲಿ ಸಿಸಿಟಿವಿಯನ್ನು ಹಾಕಿಸಿದ್ದರು. ಇದರಲ್ಲಿ ವಿಕಾಸ್ ಗುಪ್ತಾ ತನ್ನ ಮೇಲಾಧಿಕಾರಿಗೆ ಕುಡಿಯಲು ನೀರು ಕೊಡುವ ಮುನ್ನ ಅದರಲ್ಲಿ ಎಂಜಲು ಉಗುಳಿರುವುದು ಸೆರೆಯಾಗಿತ್ತು. ಇದನ್ನೇ ಸಾಕ್ಷಿಯಾಗಿ ತನ್ನ ಮೇಲಾಧಿಕಾರಿಗಳಿಗೆ ನ್ಯಾಯಾಧೀಶೆ ಕೊಟ್ಟಿದ್ದಾರೆ.