ರಾಮ ಮಂದಿರ ಸುಳ್ಳಿನ ಭರವಸೆಯಾದರೆ ಬಿಜೆಪಿಗೆ 280 ರಿಂದ 2 ಲೋಕಸಭಾ ಸ್ಥಾನ- ಉದ್ದವ್ ಠಾಕ್ರೆ

ಬಿಜೆಪಿ ನೀಡಿರುವ ರಾಮ ಮಂದಿರ ನಿರ್ಮಾಣ ಭರವಸೆ ಸುಳ್ಳಾದರೆ, 280 ರಿಂದ 2 ಲೋಕಸಭಾ ಸ್ಥಾನಗಳನ್ನು ಪಡೆಯಬೇಕಾಗುತ್ತದೆ ಎಂದು ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.
ಉದ್ದವ್ ಠಾಕ್ರೆ
ಉದ್ದವ್ ಠಾಕ್ರೆ
Updated on

ಮುಂಬೈ:  ಬಿಜೆಪಿ ನೀಡಿರುವ ರಾಮ ಮಂದಿರ ನಿರ್ಮಾಣ ಭರವಸೆ ಸುಳ್ಳಾದರೆ, 280 ರಿಂದ 2 ಲೋಕಸಭಾ ಸ್ಥಾನಗಳನ್ನು ಪಡೆಯಬೇಕಾಗುತ್ತದೆ ಎಂದು  ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ರಾಯಗಡ ಜಿಲ್ಲೆಯ ಮಹದ್ ನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿ ನಿರ್ಮಾಣಕ್ಕಾಗಿ ಇಟ್ಟಿಗೆ ಸಂಗ್ರಹಿಸಲಾಗಿದೆ. ಆದರೆ, ವಾಸ್ತವವಾಗಿ ಇದು ದೇಗುಲ ನಿರ್ಮಾಣಕ್ಕಾಗಿ ಅಲ್ಲ, ಅಧಿಕಾರಕ್ಕಾಗಿ ತೆಗೆದುಕೊಂಡ ಕ್ರಮಗಳು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಬಿಜೆಪಿ ಹಾಗೂ ಶಿವಸೇನಾ ಮೈತ್ರಿ ಮಾಡಿಕೊಂಡಿವೆ. ಆದರೆ, ಹಲವು ವಿಷಯಗಳಲ್ಲಿ ಬಿಜೆಪಿ ವಿರುದ್ಧ ನಿರಂತರವಾಗಿ  ಉದ್ದವ್ ಠಾಕ್ರೆ ವಾಗ್ದಾಳಿ ನಡೆಸುತ್ತಿದ್ದಾರೆ. ಪ್ರಸ್ತುತ ಬಿಜೆಪಿ ಲೋಕಸಭೆಯಲ್ಲಿ 272 ಸದಸ್ಯರನ್ನು ಹೊಂದಿದೆ.

ಪ್ರಸ್ತುತ ದೇಶದಲ್ಲಿ ಆಡಳಿತ ವಾತವಾರಣ ಹಾಗೂ ರಾಜಕೀಯ ಕುಸಿದಿದ್ದು, ಮುಂದಿನ ಲೋಕಸಭಾ ಚುನಾವಣೆಗಾಗಿ ಹೋರಾಟ ಆರಂಭವಾಗಿದೆ. ಏನಾಗುತ್ತದೆ ಎಂಬುದು ಗೊತ್ತಿಲ್ಲ. ಆದರೆ, ದೇಶ ಹಾಗೂ ದೇಶದ ಜನರಿಗೆ ಏನು ಆಗಬಹುದು ಎಂದರು.

ರಾಜ್ಯದಲ್ಲಿನ ಬರ ಪೀಡಿತ ಪ್ರದೇಶಗಳ ಪರಾಮರ್ಶೆನೆಗಾಗಿ ತಾವೂ ಪ್ರವಾಸ ಕೈಗೊಂಡರೆ ಪ್ರಧಾನಿ ವಿದೇಶಿ ಪ್ರವಾಸದಲ್ಲಿ ಬ್ಯೂಸಿಯಾಗಿರುತ್ತಾರೆ. ಸುಳ್ಳಿನ ಭರವಸೆ ನೀಡಿದರೆ ತಾವೂ ಬಿಜೆಪಿ ಪರ ಮತಯಾಚಿಸುವುದಿಲ್ಲ ಎಂದು ಉದ್ದವ್ ಠಾಕ್ರೆ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com