ಈ ಬಗ್ಗೆ ಸ್ವತಃ ಜೈಷ್ ಉಗ್ರಸಂಘಟನೆಯ ಮುಖ್ಯಸ್ಥ ಹಾಗೂ ಕಾಂದಹಾರ್ ವಿಮಾನ ಅಪಹರಣ ಮಾಸ್ಟರ್ ಮೈಂಡ್ ಹೇಳಿಕೊಂಡಿದ್ದು, ಈ ಕುರಿತು ಆಡಿಯೋ ರೆಕಾರ್ಡ್ ವೊಂದು ಬಿಡುಗಡೆಯಾಗಿದೆ. ಆಡಿಯೋದಲ್ಲಿ ಮಸೂದ್ ಅಜರ್ ತನ್ನ ಅಳಿಯ ಉಸ್ಮಾನ್ ಇಬ್ರಾಹಿಂ ವೀರಮರಣವನ್ನಪ್ಪಿದ್ದಾನೆ ಎಂದು ಹೇಳಿಕೊಂಡಿದ್ದು, ನನ್ನ ಪ್ರೀತಿಯ ಸೋದರಳಿಯ ಹಾಗೂ ಕಾಶ್ಮೀರಿ ಹೋರಾಟಗಾರರಾದ ಶೌಕತ್ ಅಹ್ಮದ್ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಅಂತ್ಯ ಸಂಸ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ಜನ ಸೇರಿ ಅವರ ಆತ್ಮಕ್ಕೆ ಶಾಂತಿ ಕೋರಬೇಕು ಎಂದು ಮನವಿ ಮಾಡಿದ್ದಾನೆ.