ಮದುವೆಯಾದ ಆರು ತಿಂಗಳಲ್ಲೇ ವಿಚ್ಚೇದನ ಅರ್ಜಿ ಸಲ್ಲಿಸಿದ ಲಾಲೂ ಪುತ್ರ ತೇಜ್ ಪ್ರತಾಪ್

ಮದುವೆಯಾದ ಆರು ತಿಂಗಳಲ್ಲೇ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ , ತನ್ನ ಪತ್ನಿಯಿಂದ ವಿಚ್ಚೇದನ ಕೋರಿ ಪಾಟ್ನಾದ ಸಿವಿಲ್ ನ್ಯಾಯಾಲದಲ್ಲಿ ವಿಚ್ಚೇದನ ಅರ್ಜಿ ದಾಖಲಿಸಿದ್ದಾರೆ.
ತೇಜ್ ಪ್ರತಾಪ್, ಐಶ್ವರ್ಯ ರೈ
ತೇಜ್ ಪ್ರತಾಪ್, ಐಶ್ವರ್ಯ ರೈ

ಪಾಟ್ನಾ : ಮದುವೆಯಾದ ಆರು ತಿಂಗಳಲ್ಲೇ  ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್  ಹಿರಿಯ ಮಗ ತೇಜ್ ಪ್ರತಾಪ್ ಯಾದವ್  , ತನ್ನ ಪತ್ನಿಯಿಂದ ವಿಚ್ಚೇದನ ಕೋರಿ ಪಾಟ್ನಾದ ಸಿವಿಲ್ ನ್ಯಾಯಾಲದಲ್ಲಿ  ವಿಚ್ಚೇದನ ಅರ್ಜಿ ದಾಖಲಿಸಿದ್ದಾರೆ.

ಕೆಲ ದಿನಗಳ ಹಿಂದೆಯೇ ತೇಜ್ ಪ್ರತಾಪ್  ವಿಚ್ಚೇದನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಇಂದು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಆದಾಗ್ಯೂ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ತೇಜ್ ಪ್ರತಾಪ್ ಯಾದವ್ ಕುಟುಂಬ ಸದಸ್ಯರು ನಿರಾಕರಿಸಿದ್ದಾರೆ.

ಬಹುಕೋಟಿ ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್ ರಾಂಚಿಯ  ಜೈಲಿನಲ್ಲಿದ್ದಾರೆ.  ತೇಜ್ ಪ್ರತಾಪ್ ಪತ್ನಿ ಐಶ್ವರ್ಯ ತಂದೆ ಕೂಡಾ ಹಾಲಿ ಆರ್ ಜೆಡಿ ಶಾಸಕರಾಗಿದ್ದಾರೆ. ಮೇ ತಿಂಗಳಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ತೇಜ್ ಪ್ರತಾಪ್  ವೈಶಾಲಿ ಜಿಲ್ಲೆಯ ಮಾನ್ಹಾ ಕ್ಷೇತ್ರದ ಶಾಸಕರಾಗಿದ್ದು, ಮಹಾಮೈತ್ರಿ ಸರ್ಕಾರದಲ್ಲಿ ತೇಜ್ ಪ್ರತಾಪ್  ಆರೋಗ್ಯ ಸಚಿವರಾಗಿದ್ದರು. ಲಾಲೂ ಪ್ರಸಾದ್ ಯಾದವ್  ಅನುಪಸ್ಥಿತಿಯಲ್ಲಿ  ಪಕ್ಷ ಮುನ್ನಡೆಸುತ್ತಿರುವ ತೇಜಸ್ವಿ ಯಾದವ್ ಜೊತೆಗೆ  ತೇಜ್ ಪ್ರತಾಪ್ ಉತ್ತಮ  ಸಂಬಂಧ ಹೊಂದಿಲ್ಲ ಎಂಬುದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com