ಚೆನ್ನೈ : ಬೆಳಕಿನ ಹಬ್ಬ ದೀಪಾವಳಿಯಂದು ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿರುವ ಅವಧಿಯಲ್ಲಿ ಪಟಾಕಿ ಸಿಡಿಸಿದ ಮಕ್ಕಳನ್ನೂ ಶಿಕ್ಷಿಸಲಾಗುವುದೇ ಎಂದು ಕೇಂದ್ರ ಸಚಿವ ಪಿ. ರಾಧಾಕೃಷ್ಣನ್ ಹೇಳುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಕೇಂದ್ರ ಸಚಿವರ ಈ ಹೇಳಿಕೆ ನೀಡುವ ಮೂಲಕ ಸುಪ್ರೀಂಕೋರ್ಟ್ ಆದೇಶಕ್ಕೆ ಅಗೌರವ ತೋರಿದ್ದಾರೆ ಎಂದು ಡಿಎಂಕೆ ಆರೋಪಿಸಿದೆ.
ಯುವಕರು ಮಾತ್ರವಲ್ಲ, ದೇಶಾದ್ಯಂತ ಶೇ, 90 ರಷ್ಚು ಮಕ್ಕಳು ಪಟಾಕಿ ಸಿಡಿಸುತ್ತಾರೆ . ಅವರ ಮೇಲೆ ಏನು ಮಾಡುವುದಕ್ಕೆ ಆಗುತ್ತದೆ. ಕಾನೂನು ಹೇರಲು ಸಾಧ್ಯವೇ ? ಎಂದು ರಾಧಾಕೃಷ್ಣನ್ ಇತ್ತೀಚಿಗೆ ಹೇಳಿಕೆ ನೀಡಿದ್ದರು.
ಕ್ರಿಸ್ ಮಸ್ ಆಚರಣೆಗೆ ಒಂದೂವರೆ ತಿಂಗಳು ಬಾಕಿ ಇರುವಂತೆಯೇ ಬರುವ ಬೆಳಕಿನ ಹಬ್ಬ ದೀಪಾವಳಿ ಜನರ ಹಬ್ಬವಾಗಿದೆ. ಆಗಲೂ ಕೂಡಾ ಇಂತಹ ನಿರ್ಬಂಧ ಹೇರಲಾಗುತ್ತದೆಯೇ ?
ಸುಪ್ರೀಂಕೋರ್ಟ್ ಆದೇಶ ಅನುಷ್ಠಾನಗೊಳಿಸಲು ಸರ್ಕಾರ ಪ್ರತಿ ಮನೆಗೂ ಪೊಲೀಸರನ್ನು ನೇಮಿಸಬೇಕಾಗುತ್ತದೆ ಎಂದು ಅವರು ಹೇಳಿದ್ದರು.
ಈ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಡಿಎಂಕೆ ವಕ್ತಾರ ಸಿ. ರವೀಂದ್ರನ್, ಪೋಷಕರ ಮೇಲ್ವಿಚಾರಣೆಯಲ್ಲಿ ಮಕ್ಕಳು ಪಟಾಕಿ ಸಿಡಿಸುತ್ತಾರೆ. ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಒಳ್ಳೆಯ ತೀರ್ಪು ನೀಡಿದೆ. ಆ ತೀರ್ಪನ್ನು ಎಲ್ಲರೂ ಸ್ವಾಗತಿಸಬೇಕಾಗಿದೆ ಎಂದು ಹೇಳಿದರು.
Advertisement