ರಾಮ ಮಂದಿರ ನಿರ್ಮಾಣ ನನ್ನ ಕನಸು: ಉಮಾ ಭಾರತಿ

ಉತ್ತರ ಪ್ರದೇಶದ ವಿವಾದಿತ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ತಮ್ಮ ಕನಸಾಗಿದ್ದು, ತಮ್ಮ...
ಉಮಾ ಭಾರತಿ
ಉಮಾ ಭಾರತಿ
Updated on

ಪಾಟ್ನಾ: ಉತ್ತರ ಪ್ರದೇಶದ ವಿವಾದಿತ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ತಮ್ಮ ಕನಸಾಗಿದ್ದು, ತಮ್ಮ ಕಡೆಯಿಂದ ಸಾಧ್ಯವಾದ ಎಲ್ಲಾ ನೆರವನ್ನು ನೀಡಲು ಸಿದ್ಧವಿರುವುದಾಗಿ ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

ಈ ಬಗ್ಗೆ ಎಎನ್ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಮ ಜನ್ಮಭೂಮಿ ಅಂದೋಲನದಲ್ಲಿ ನಾನು ಸಕ್ರಿಯವಾಗಿ ಭಾಗವಹಿಸಿದ್ದೇನೆ, ನನ್ನ ಹಾಗೂ ಎಲ್ ಕೆ ಅಡ್ವಾಣಿ ಮೇಲೆ ಅಯೋಧ್ಯೆ ವಿವಾದ ಕುರಿತ ಕೇಸು ವಿಚಾರಣೆ ನಡೆಯುತ್ತಿದ್ದು, ನನಗೆ ಈ ಬಗ್ಗೆ ಹೆಮ್ಮೆಯಿದೆ. ರಾಮ ಮಂದಿರ ನಿರ್ಮಾಣ ನನ್ನ ಕನಸಾಗಿದ್ದು ನನ್ನ ಕಡೆಯಿಂದ ಯಾವುದೇ ರೀತಿಯ ಸಹಕಾರ ನೀಡಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಬರುವ ಮುನ್ನ ರಾಮಮಂದಿರ ನಿರ್ಮಾಣಕ್ಕೆ ವಿಧೇಯಕ ತರಬೇಕೆಂದು ಒತ್ತಾಯ ಕೇಳಿಬರುತ್ತಿರುವುದರ ಮಧ್ಯೆ, ನ್ಯಾಯಾಂಗ ವಿಳಂಬದ ಬಗ್ಗೆ ಕಾನೂನು ರಚನೆಯಾಗಬೇಕು ಎಂದು ಕೇಂದ್ರ ಸಚಿವ ಪಿಪಿ ಚೌಧರಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ರಾಮ ಮಂದಿರ ನಿರ್ಮಾಣವಾಗಲೇಬೇಕು. ಸುಪ್ರೀಂ ಕೋರ್ಟ್ ಮುಂದಿರುವ ಕೇಸು ಶೀಘ್ರವೇ ಇತ್ಯರ್ಥವಾಗಬೇಕು. ಸರ್ಕಾರದ ಬಗ್ಗೆ ನನಗೇನು ಗೊತ್ತಿಲ್ಲ. ನ್ಯಾಯಾಂಗ ತೀರ್ಪು ವಿಳಂಬವಾಗುವುದಾದರೆ ಕಾನೂನು ರಚನೆಯಾಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಪಿ ಪಿ ಚೌಧರಿ ಹೇಳಿದ್ದರು.

ಕಳೆದ ಅಕ್ಟೋಬರ್ 29ರಂದು ಸುಪ್ರೀಂ ಕೋರ್ಟ್ ಕೇಸಿನ ವಿಚಾರಣೆಯನ್ನು ಜನವರಿಗೆ ಮುಂದೂಡಿತ್ತು. ವಿವಾದಿತ ಅಯೋಧ್ಯೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಕಾರಾ ಮತ್ತು ರಾಮ್ ಲಲ್ಲಾ ಎಂಬುದಾಗಿ ಮೂರು ಭಾಗಗಳಾಗಿ ಮಾಡಬೇಕು ಎಂಬ 2010ರಲ್ಲಿ ಅಲಹಾಬಾದ್ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅಲ್ಲಿ ಸಲ್ಲಿಸಲಾಗಿತ್ತು, ಅದರ ವಿಚಾರಣೆ ಇನ್ನೂ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com