ಇದಕ್ಕಾಗಿ ಮುಖ್ಯಮಂತ್ರಿ ದೇಬ್ ತ್ರಿಪುರಾದ 5,000 ಕುಟುಂಬಗಳಿಗೆ ಗೋವನ್ನು ವಿತರಿಸಲು ಮುಂದಾಗಿದ್ದಾರೆ. ಈ ಯೋಜನೆಯಿಂದ ಮುಂದಿನ ಆರು ತಿಂಗಳಲ್ಲಿ ಗೋ ಸಾಕಣೆ ಮಾಡುವ ಕುಟುಂಬಕ್ಕೆಹಣ ಸಂಪಾದನೆ ಮಾಡಲು ಸಹಾಯವಾಗಲಿದೆ. "ನಾನು ಬೃಹತ್ ಕೈಗಾರಿಕೆ ಸ್ಥಾಪನೆಯ ವಿರೋಧಿಯಲ್ಲ. ಆದರೆ 2000 ಜನರ ಉದ್ಯೋಗಕ್ಕಾಗಿ 10,000 ಕೋಟಿ ರು. ಹೂಡಿಕೆ ಮಾಡಬೇಕಿದೆ. ಆದರೆ ನಾನು 10,000 ಗೋಈವನ್ನು 5000 ಕುಟುಂಬಗಳಿಗೆ ನಿಡಿದರೆ ಅವರು ಆರು ತಿಂಗಳಿನಲ್ಲಿ ಇದನ್ನು ಆದಾಯ ಮೂಲವಾಗಿಸಿ ಹಣ ಸಂಪಾದನೆಗೆ ತೊಡಗುತ್ತಾರೆ" ಅವರು ಹೇಳಿದ್ದಾರೆ.