ಯೂ ಟರ್ನ್ ಹೊಡೆದ 'ಗಜ' ಚಂಡಮಾರುತ: ಚೆನ್ನೈಯಲ್ಲಿ ಭಾರೀ ಮಳೆ ಸಾಧ್ಯತೆ

ಗಜ ಚಂಡಮಾರುತ ರಾಜ್ಯಕ್ಕೆ ಕಾಲಿಡಲಿದೆ, ಇನ್ನು ಎರಡು ಮೂರು ದಿನ ಮಳೆಯಾಗಲಿದೆ, ಕರಾವಳಿಯಲ್ಲಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚೆನ್ನೈ: ಗಜ ಚಂಡಮಾರುತ ರಾಜ್ಯಕ್ಕೆ ಕಾಲಿಟ್ಟು ಎರಡು ಮೂರು ದಿನ ಮಳೆಯಾಗಲಿದೆ, ಕರಾವಳಿಯಲ್ಲಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ವರದಿ ಆರಂಭದಲ್ಲಿ ಹೇಳಿತ್ತು. ಆದರೆ ಇದೀಗ ಗಜ ಚಂಡಮಾರುತದ ದಿಕ್ಕು ನಿನ್ನೆ ವಾಯುವ್ಯ ದಿಕ್ಕಿಗೆ ತಿರುಗಿ ನಂತರ ಮತ್ತೆ ಪಶ್ಚಿಮ-ನೈಋತ್ಯ ದಿಕ್ಕಿನೆಡೆಗೆ ಬೀಸಿದೆ.
ನಿನ್ನೆ ರಾತ್ರಿ ವರದಿ ನೀಡಿದ ಭಾರತೀಯ ಹವಾಮಾನ ಇಲಾಖೆ ಪ್ರತಿ ಗಂಟೆಗೆ 10 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಗಜ ಚಂಡಮಾರುತ ಚೆನ್ನೈನಿಂದ ಪೂರ್ವಕ್ಕೆ 600 ಕಿ.ಮೀ ದೂರದಲ್ಲಿ ಮತ್ತು ನಾಗಪಟ್ಟಿನಂನ 720 ಕಿ ಮೀ ಈಶಾನ್ಯದಿಂದ ಬಂಗಾಳದ ಪಶ್ಚಿಮ-ಮಧ್ಯ ಮತ್ತು ಪೂರ್ವದ ಕೇಂದ್ರ ಮತ್ತು ದಕ್ಷಿಣ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿದೆ ಎಂದು ಹೇಳುತ್ತದೆ.

ಇದು ಪಶ್ಚಿಮ-ನೈಋತ್ಯ ದಿಕ್ಕನ್ನು ಸರಿಸಿ ಮತ್ತು ಮುಂದಿನ 24 ಗಂಟೆಗಳಲ್ಲಿ ತೀವ್ರ ಚಂಡಮಾರುತದ ಬಿರುಗಾಳಿಯನ್ನು ತೀವ್ರಗೊಳಿಸುತ್ತದೆ.ಪಶ್ಚಿಮ-ನೈಋತ್ಯ ದಿಕ್ಕಿಗೆ ಚಲಿಸುವಾಗ, ಕ್ರಮೇಣ ದುರ್ಬಲಗೊಳಿಸಬಹುದು ಮತ್ತು ಪಂಬನ್ ಮತ್ತು ಕಡಲೂರು ನಡುವೆ ನಾಳೆ ಮಧ್ಯಾಹ್ನ ತಮಿಳುನಾಡಿನ ಕರಾವಳಿ ಭಾಗ ದಾಟುವ ಸಾಧ್ಯತೆಯಿದೆ. ಇದರಿಂದ ಚೆನ್ನೈಯಲ್ಲಿ ತೀವ್ರ ಮಳೆಯಾಗಲಿದೆ, ಅಲ್ಲದೆ ಕದ್ದಲೂರು, ನಾಗಪಟ್ಟಿಣಂ, ತಿರುವಾರೂರು, ತಂಜಾವೂರು, ಪುದುಕೊಟ್ಟೈ, ತೂತುಕುಡಿ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ.

ಗಾಳಿ ಪ್ರತಿ ಗಂಟೆಗೆ 70ರಿಂದ 80 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದ್ದು ಪಶ್ಚಿಮ-ಕೇಂದ್ರ ಭಾಗದಲ್ಲಿ 90 ಕಿಲೋ ಮೀಟರ್ ಮತ್ತು ಪಕ್ಕದ ಪೂರ್ವ ಕೇಂದ್ರ ಮತ್ತು ದಕ್ಷಿಣ ಬಂಗಾಳಕೊಲ್ಲಿ ಪ್ರದೇಶದಲ್ಲಿ 90ರಿಂದ 100 ಕಿಲೋ ಮೀಟರ್ ವೇಗದಲ್ಲಿ ಬೀಸಿ ನೈರುತ್ಯ ಭಾಗದಲ್ಲಿ 110 ಕಿಲೋ ಮೀಟರ್ ವೇಗದಲ್ಲಿ ಮತ್ತು ಪಕ್ಕದ ಪಶ್ಚಿಮಕೇಂದ್ರ ಹಾಗೂ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಇಂದಿನಿಂದ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com