ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ದೆಹಲಿಯಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅರುಣ್ ಜೇಟ್ಲಿ, ಇಂದು ಮುದ್ರಣ, ಡಿಜಿಟಲ್ ಮತ್ತು ಎಲೆಕ್ಟ್ರಾನಿಕ್ಸ್ ಮಾಧ್ಯಮಗಳು ತುಂಬಾ ಪೈಪೋಟಿ ಎದುರಿಸುತ್ತಿವೆ. ಮಾಧ್ಯಮಗಳ ಮೇಲೆ ಯಾವುದೇ ರೀತಿಯ ಒತ್ತಡ ಹೇರುವಿಕೆ ಅಸಾಧ್ಯವಾದದ್ದಾಗಿದ್ದು, ದೇಶದಲ್ಲಿ ತಂತ್ರಜ್ಞಾನದ ಅಸಾಧಾರಣ ಪ್ರಗತಿಯಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.