ಇದೇ ವೇಳೆ ಕೋರ್ಟ್ ಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ, ತಮ್ಮನ್ನು ನಾಗ್ಪುರಕ್ಕೆ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿರುವ ಸಿನ್ಹಾ, ರಾಕೇಶ್ ಆಸ್ತಾನ ಪ್ರಕರಣದಲ್ಲಿ ಅಜಿತ್ ದೋವಲ್ ಹಸ್ತಕ್ಷೇಪ ಮಾಡಿದ್ದಾರೆ, ಪ್ರಕರಣದ ಸಂಬಂಧ ತನಿಖೆಯ ದೃಷ್ಟಿಯಿಂದಾಗಿ ಮಹತ್ವ ಪಡೆದುಕೊಂಡಿದ್ದ ಶೋಧ ಕಾರ್ಯಾಚಾರಣೆಗೆ ಅಜಿತ್ ದೋವಲ್ ಅನುವು ಮಾಡಿಕೊಟ್ಟಿಲ್ಲ. ಜೊತೆಗೆ ನೀರವ್ ಮೋದಿ ವಿರುದ್ಧದ ತನಿಖೆಯಲ್ಲೂ ಸಹ ಅಜಿತ್ ದೋವಲ್ ಹಸ್ತಕ್ಷೇಪ ಮಾಡಿದ್ದಾರೆ ಎಂದು ಸಿನ್ಹಾ ಆರೋಪಿಸಿದ್ದಾರೆ.