ದೇಶ
'ಮಂದಿರ ಕಟ್ಟುವೆವು' ಹೇಳಿಕೆಯಿಂದ ಎಷ್ಟು ದಿನ ಜನರನ್ನು ಮೂರ್ಖರನ್ನಾಗಿ ಮಾಡುತ್ತೀರಿ?: ಉದ್ಧವ್ ಠಾಕ್ರೆ
ರಾಮ ಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಜನರನ್ನು ಎಷ್ಟು ದಿನ ಮುರ್ಖರನ್ನಾಗಿ ಮಾಡುತ್ತೀರಿ?...
ಮುಂಬೈ: ರಾಮ ಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಜನರನ್ನು ಎಷ್ಟು ದಿನ ಮುರ್ಖರನ್ನಾಗಿ ಮಾಡುತ್ತೀರಿ? ಎಂದು ಬಿಜೆಪಿಗೆ ಮಿತ್ರ ಪಕ್ಷ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಗುರುವಾರ ಖಾರವಾಗಿಯೇ ಪ್ರಶ್ನಿಸಿದ್ದಾರೆ.
ಪ್ರತಿ ಚುನಾವಣೆಯಲ್ಲೂ ರಾಮ ಮಂದಿರ ವಿಷಯ ಪ್ರಸ್ತಾಪಿಸುತ್ತಿರುವುದು ಅಚ್ಚರಿ ಮೂಡಿಸಿದೆ ಮತ್ತು 'ಅಯೋಧ್ಯೆಯಲ್ಲೇ ರಾಮ ಮಂದಿರ ನಿರ್ಮಾಣ' ಮಾಡುತ್ತೇವೆ ಎಂಬ ಘೋಷಣೆಯೊಂದಿಗೆ ಜನರನ್ನು ಎಷ್ಟು ವರ್ಷ ಮುರ್ಖರನ್ನಾಗಿ ಮಾಡುತ್ತೀರಿ ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.
ನವೆಂಬರ್ 25ರಂದು ಅಯೋಧ್ಯ ಭೇಟಿ ನೀಡಿದ ಸಂದರ್ಭದಲ್ಲಿ ಇನ್ನು ಎಷ್ಟು ಚುನಾವಣೆಗಳಲ್ಲಿ ಜನರನ್ನು ಮುರ್ಖರನ್ನಾಗಿ ಮಾಡುತ್ತೀರಿ ಎಂದು ಬಿಜೆಪಿಯನ್ನು ಪ್ರಶ್ನಿಸುವುದಾಗಿ ಠಾಕ್ರೆ ತಿಳಿಸಿದ್ದಾರೆ.
ಛತ್ರಿಪತಿ ಶಿವಾಜಿ ಮಹಾರಾಜನ ಜನ್ಮಸ್ಥಳವಾದ ಶಿವನೇರಿ ಕೋಟೆಯಲ್ಲಿನ ಮಣ್ಣನ್ನು ಸಂಗ್ರಹಿಸಿದ ಉದ್ಧವ್ ಠಾಕ್ರೆ, ಭಾನುವಾರ ಅದನ್ನು ಅಯೋಧ್ಯೆಗೆ ತೆಗೆದುಕೊಂಡು ಹೋಗುವುದಾಗಿ ವರದಿಗಾರರಿಗೆ ಹಳಿದ್ದಾರೆ.
ಎಲ್ಲಾ ಹಿಂದೂಗಳ ಭಾವನೆಯೊಂದಿಗೆ ಶಿವನೇರಿ ಕೋಟೆಯ ಮಣ್ಣನ್ನು ತೆಗೆದುಕೊಂಡಿದ್ದು, ಈ ಮಣ್ಣಿನಿಂದಲಾದರೂ ರಾಮ ಮಂದಿರ ನಿರ್ಮಾಣ ಕಾರ್ಯ ಚುರುಕಾಗಲಿದೆ ಎಂದಿದ್ದಾರೆ.