ಒಡಿಶಾ: ಬಿಜೆಪಿ ಹಿರಿಯ ನಾಯಕರಾದ ರಾಯ್, ಮಹಾಪತ್ರ ರಾಜೀನಾಮೆ

ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ದೀಲಿಪ್ ರಾಯ್ ಮತ್ತು ರಾಷ್ಟ್ರೀಯ ಪ್ರತಿನಿಧಿ ಬಿಜಯ್ ಮಹಾಪತ್ರ ....
ದೀಲಿಪ್ ರಾಯ್
ದೀಲಿಪ್ ರಾಯ್
ಭುವನೇಶ್ವರ: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ದೀಲಿಪ್ ರಾಯ್ ಮತ್ತು ರಾಷ್ಟ್ರೀಯ ಪ್ರತಿನಿಧಿ ಬಿಜಯ್ ಮಹಾಪತ್ರ ಅವರು ಶುಕ್ರವಾರ ಪಕ್ಷ ತೊರೆದಿದ್ದು, ಬಿಜೆಪಿಯ ಮಿಷನ್ 120+ಗೆ ಭಾರಿ ಹಿನ್ನಡೆಯಾಗಿದೆ.
ರಾಯ್ ಅವರು ಬಿಜೆಪಿಗೆ ರಾಜೀನಾಮೆ ನೀಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಬಳಿಕ ಒಡಿಶಾ ವಿಧಾನಸಭೆ ಸ್ಪೀಕರ್ ಪ್ರದೀಪ್ ಅಮತ್ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ರಾಯ್ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ.
ಇನ್ನು ಈ ರಾಜೀನಾಮೆ ಕುರಿತು ಸಾಮಾಜಿಕ ತಾಣ ಫೇಸ್ ಬುಕ್ ನಲ್ಲೂ ರಾಯ್ ಪೋಸ್ಟ್ ಹಾಕಿದ್ದು, 2019ರ ವಿಧಾನಸಭೆ ಚುನಾವಣೆಯಲ್ಲಿ ತಾವು ರುರ್ಕೆಲಾದಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಮಹಾಪತ್ರ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಬಿಜೆಪಿ ತೊರೆದಿರುವ ಈ ಇಬ್ಬರು ನಾಯಕರು ಬಿಜೆಡಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com